Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಹೊಸ ಜೀವನದ ಖುಷಿಯಲ್ಲಿ ನಲಿದಾಡಿದ ಮದುಮಗಳು ,ಮದುವೆಯ ದಿನ ಬಾವಿಯಲ್ಲಿ ಶವವಾಗಿ ಪತ್ತೆ

Spread the love

ರಾಜಸ್ಥಾನ:ರಾಜಸ್ಥಾನದ ಡುಂಗರ್‌ಪುರ ಜಿಲ್ಲೆಯ ಸರೋಡ ಪೊಲೀಸ್ ಠಾಣಾ ವ್ಯಾಪ್ತಿಯಿಂದ ಅತ್ಯಂತ ದುಃಖಕರ ಸುದ್ದಿ ಹೊರಬಂದಿದೆ. ಮದುವೆಯಾಗಬೇಕಿದ್ದ ಯುವತಿ ಏಳು ಸುತ್ತುಗಳಿಗೆ ಮುನ್ನವೇ ಮೃತಪಟ್ಟಿದ್ದಾಳೆ.

ಶಿವರಾಜಪುರ ನಿವಾಸಿ ನಾರಾಯಣ ಪ್ರಜಾಪತಿ ಅವರ ಪುತ್ರಿ ನೇಹಾ ಪ್ರಜಾಪತಿ ಅವರ ಮದುವೆ ಏಪ್ರಿಲ್ 19 ರಂದು ನಿಗದಿಯಾಗಿತ್ತು. ಮನೆಯಲ್ಲಿ ಸಂಭ್ರಮದ ವಾತಾವರಣವಿತ್ತು. ಗುರುವಾರ ನೇಹಾಳ ಬಿಂದೋಲಿ ನಡೆದಿತ್ತು.

ಕುಟುಂಬಸ್ಥರು ಮತ್ತು ಗ್ರಾಮಸ್ಥರು ರಾತ್ರಿಯಿಡೀ ನೇಹಾಳಿಗಾಗಿ ಹುಡುಕಾಟ ನಡೆಸಿದರು. ಆಕೆಯ ಶವ ಹಳೆಯ ಬಾವಿಯೊಂದರಲ್ಲಿ ಪತ್ತೆಯಾಗಿದೆ.ವಧುವಿನ ತಂದೆ ನಾರಾಯಣ ಪ್ರಜಾಪತಿ ಕೊಲೆಯ ಶಂಕೆ ವ್ಯಕ್ತಪಡಿಸಿದ್ದಾರೆ. ಯಾರೋ ಮಾನಸಿಕವಾಗಿ ಹಿಂಸೆ ನೀಡಿದ್ದಾರೆ ಅಥವಾ ಕೊಲೆ ಮಾಡಿ ಬಾವಿಗೆ ಎಸೆದಿರಬಹುದು ಎಂದಿದ್ದಾರೆ.

ನೇಹಾಳ ಮೃತ್ಯುವಿನಿಂದ ಕುಟುಂಬ ಮತ್ತು ಗ್ರಾಮವೇ ದುಃಖದಲ್ಲಿದೆ. ನಿನ್ನೆಯವರೆಗೆ ಹಾಡು-ನೃತ್ಯ ನಡೆಯುತ್ತಿದ್ದ ಮನೆಯಲ್ಲಿ ಇಂದು ಮಾತಮ.ನೇಹಾ ತನ್ನ ಮದುವೆಯ ಬಗ್ಗೆ ತುಂಬಾ ಉತ್ಸುಕಳಾಗಿದ್ದಳು. ಬಿಂದೋಲಿಯಲ್ಲಿ ಸಂಗೀತಕ್ಕೆ ತಕ್ಕಂತೆ ನರ್ತಿಸಿದ್ದಳು. ಆದರೆ ಇಂದಿನ ಘಟನೆಯಿಂದ ಗ್ರಾಮದಲ್ಲಿ ದುಃಖ ಮಡುಗಟ್ಟಿದೆ.


Spread the love
Share:

administrator

Leave a Reply

Your email address will not be published. Required fields are marked *