Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಬ್ರೆಜಿಲ್‌ನ ಜೋನಸ್‌ಗೆ ಪದ್ಮಶ್ರೀ, ಐಐಟಿ ಬಾಬಾ ಸೋಷಿಯಲ್ ಸ್ಟಾರ್: ಆಧ್ಯಾತ್ಮಿಕತೆಗೆ ಎರಡು ಮುಖಗಳು

Spread the love

ನವದೆಹಲಿ: ಶಿಕ್ಷಣ , ಆಧ್ಯಾತ್ಮಿಕತೆ ಮತ್ತು ಡಿಜಿಟಲ್ ಸಂಸ್ಕೃತಿಯುಒಂದಾಗುತ್ತಿರುವ ಈ ಯುಗದಲ್ಲಿ ಇಬ್ಬರು ಎಂಜಿನಿಯರ್‌ಗಳ ಆಧ್ಯಾತ್ಮಿಕ ಪಯಣವು ಭಾರತೀಯ ಸಂಪ್ರದಾಯದಿಂದ ಆರಂಭವಾದರೂ ವಿಭಿನ್ನ ಫಲಿತಾಂಶಗಳನ್ನು ಕಂಡಿದೆ.

ಒಬ್ಬರು ಬ್ರೆಜಿಲ್‌ನ ಜೋನಸ್ ಮಾಸೆಟ್ಟಿ ಪದ್ಮಶ್ರೀ ಪಡೆದರೆ, ಮತ್ತೊಬ್ಬರು ಅಭಯ್ ಸಿಂಗ್ ಸೋಷಿಯಲ್ ಮೀಡಿಯಾ ಸ್ಟಾರ್ ಆದರು. ಈ ಇಬ್ಬರೂ ಭಾರತೀಯ ಸಂಸ್ಕೃತಿಯ ವಿಭಿನ್ನ ಮುಖಗಳು. ಒಬ್ಬರು ಜ್ಞಾನದ ಮೌಲ್ಯವನ್ನು ಪ್ರತಿನಿಧಿಸಿದರೆ, ಮತ್ತೊಬ್ಬರು ಆಧುನಿಕ ಆಕರ್ಷಣೆಯ ಸವಾಲನ್ನು ಪ್ರತಿನಿಧಿಸುತ್ತಾರೆ.

ಬ್ರೆಜಿಲ್‌ನ ಜೋನಸ್ ಮಾಸೆಟ್ಟಿ ಈಗ ವೇದಾಂತಾಚಾರ್ಯ ವಿಶ್ವನಾಥ ಎಂದು ಗೌರವಿಸಲ್ಪಡುತ್ತಿದ್ದಾರೆ. ರಿಯೋ ಡಿ ಜನೈರೊದ ಮಿಲಿಟರಿ ಇನ್‌ಸ್ಟಿಟ್ಯೂಟ್‌ನಲ್ಲಿ ಮೆಕಾನಿಕಲ್ ಎಂಜಿನಿಯರಿಂಗ್ ಓದಿ, ಷೇರು ಮಾರುಕಟ್ಟೆಯಲ್ಲಿ ತಂತ್ರಜ್ಞರಾಗಿದ್ದರು. ಆದರೆ, 2003ರಲ್ಲಿ ಆಧ್ಯಾತ್ಮಿಕತಯ ದಾರಿ ಹಿಡಿದರು. ಗ್ಲೋರಿಯಾ ಆರಿಯೇರಾ ಮತ್ತು ಸ್ವಾಮಿ ದಯಾನಂದ ಸರಸ್ವತಿಯವರ ಮಾರ್ಗದರ್ಶನದಲ್ಲಿ, ಕೊಯಮತ್ತೂರಿನ ಆರ್ಷ ವಿದ್ಯಾ ಗುರುಕುಲದಲ್ಲಿ ನಾಲ್ಕು ವರ್ಷಗಳ ಕಾಲ ಗುರು- ಶಿಷ್ಯ ಸಂಪ್ರದಾಯದಲ್ಲಿ ತೊಡಗಿದರು.

2014ರಲ್ಲಿ ಬ್ರೆಜಿಲ್‌ಗೆ ಮರಳಿ ಪೆಟ್ರೊಪೊಲಿಸ್‌ನಲ್ಲಿ ವಿಶ್ವ ವಿದ್ಯಾ ಗುರುಕುಲ ಸ್ಥಾಪಿಸಿ, ಭಗವದ್ಗೀತೆ, ವೇದಾಂತ, ಸಂಸ್ಕೃತ ಮತ್ತು ಆಧ್ಯಾತ್ಮಿಕತೆಯನ್ನು 1.5 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕಲಿಸಿದರು. 2025ರಲ್ಲಿ ಭಾರತೀಯ ಜ್ಞಾನ ವ್ಯವಸ್ಥೆಯ ಜಾಗತಿಕೀಕರಣಕ್ಕಾಗಿ ಅವರಿಗೆ ಪದ್ಮಶ್ರೀ ನೀಡಲಾಯಿತು. ಪ್ರಧಾನಿ ನರೇಂದ್ರ ಮೋದಿ ಮನ್ ಕೀ ಬಾತ್‌ನಲ್ಲಿ ಮಾಸೆಟ್ಟಿಯನ್ನು ಭಾರತೀಯ ಸಂಸ್ಕೃತಿಯ ಪರಿವರ್ತಕ ಶಕ್ತಿಯ ಸಾಕ್ಷಿಯೆಂದು ಶ್ಲಾಘಿಸಿದರು.

“ವೇದಾಂತವು ಧರ್ಮವಲ್ಲ, ಜೀವನ ಕಲೆ” ಎಂದು ಮಾಸೆಟ್ಟಿ ವಿನಮ್ರವಾಗಿ ಹೇಳುತ್ತಾರೆ. ಐಐಟಿ ಖರಗ್‌ಪುರದ ಹಳೆಯ ವಿದ್ಯಾರ್ಥಿ ಅಭಯ್ ಸಿಂಗ್ ಅವರು ಇತ್ತೀಚಿಗೆ ಐಐಟಿ ಬಾಬಾ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪ್ರಚಾರ ಪಡೆದಿದ್ದಾರೆ.

2025ರ ಮಹಾಕುಂಭದಲ್ಲಿ ಕೇಸರಿ ವಸ್ತ್ರದಲ್ಲಿ ಸ್ಮಾರ್ಟ್‌ಫೋನ್ ಹಿಡಿದು ರೀಲ್ಸ್ ಮಾಡುತ್ತಾ, ಸೆಲ್ಫಿಗಳೊಂದಿಗೆ ಜ್ಞಾನವನ್ನು ಇನ್‌ಫ್ಲುಯೆನ್ಸರ್ ಶೈಲಿಯಲ್ಲಿ ನೀಡಿದರು. ಅವರು ಜನಪ್ರಿಯತೆ ಪಡೆದರೂ ಅವರನ್ನು ಹಾಸ್ಯಾಸ್ಪದವಾಗಿ ಪರಿಗಣಿಸಲಾಯಿತು. ಐಐಟಿ ಬಾಬಾ ಎಂಬ ಹೆಸರಿನಿಂದ ಅವರನ್ನು ಗೇಲಿ ಮಾಡಲು ಇದು ಕಾರಣವಾಯಿತು.

ಈ ಇಬ್ಬರ ಪಯಣವು ಆಧ್ಯಾತ್ಮಿಕತೆಯ ಗುರುತನ್ನು ಎತ್ತಿಹಿಡಿಯುತ್ತದೆ. ಮಾಸೆಟ್ಟಿಯ ಸಂಯಮಿತ, ವೇದಾಧಾರಿತ ಮಾರ್ಗವು ಪೂರ್ವ ಮತ್ತು ಪಾಶ್ಚಿಮಾತ್ಯರಿಗೆ ಸ್ಫೂರ್ತಿಯಾದರೆ, ಅಭಯ್ ಸಿಂಗ್‌ ಅವರ ಡಿಜಿಟಲ್ ಹಾಗೂ ಮೊದಲಿನ ಶೈಲಿಯು ಆಧ್ಯಾತ್ಮಿಕತೆ ಮತ್ತು ಪ್ರದರ್ಶನದ ನಡುವಿನ ಗೆರೆಯನ್ನು ತೋರಿಸುತ್ತದೆ. ಇವರಿಬ್ಬರೂ ಭಾರತೀಯ ಸಂಸ್ಕೃತಿಯ ವಿಭಿನ್ನ ಮುಖಗಳನ್ನು ಪ್ರತಿನಿಧಿಸುತ್ತಾರೆ. ಒಬ್ಬರು ಶಾಶ್ವತ ಜ್ಞಾನದ ಮೌಲ್ಯವನ್ನು ಪ್ರತಿನಿಧಿಸಿದರೆ, ಮತ್ತೊಬ್ಬರು ಆಧುನಿಕ ಯುಗದ ಗಮನ, ಆರ್ಷಣೆಯ ಸವಾಲನ್ನು ಪ್ರತಿನಿಧಿಸುತ್ತಾರೆ.


Spread the love
Share:

administrator

Leave a Reply

Your email address will not be published. Required fields are marked *