ನಿತ್ಯಾನಂದನ ಕೈಲಾಸಕ್ಕೆ ಬೊಲಿವಿಯಾದ ಬ್ರೇಕ್

ಬೊಲಿವಿಯಾ : ನಿತ್ಯಾನಂದ ಮತ್ತು ಅವರ ಶಿಷ್ಯರು ಬೊಲಿವಿಯಾದಲ್ಲಿ 4.8 ಲಕ್ಷ ಹೆಕ್ಟೇರ್ ಭೂಮಿಯನ್ನು ವಂಚನೆ ಮೂಲಕ ವಶಪಡಿಸಿಕೊಂಡಿದ್ದಾರೆ ಎಂಬ ಆರೋಪವಿದೆ. ಈ ಭೂಮಿಯನ್ನು ಕೈಲಾಸದ ಭಾಗವನ್ನಾಗಿ ಘೋಷಿಸಲು ಅವರು ಯತ್ನಿಸಿದರೂ, ವಿಷಯ ಮಾಧ್ಯಮಗಳಿಗೆ ಸೋರಿಕೆಯಾದ ಬಳಿಕ ಬೊಲಿವಿಯಾ ಸರ್ಕಾರ ಒಪ್ಪಂದವನ್ನು ರದ್ದುಗೊಳಿಸಿದೆ. ಈ ಬೆಳವಣಿಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ನಿತ್ಯಾನಂದನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಡ ಹೆಚ್ಚಾಗಿದೆ.