ಪ್ರೇಯಸಿ ಜೊತೆಗೂಡಿ ಪತ್ನಿ ಕೊ*ಲೆ ಮಾಡಿ ಗಳಗಳನೆ ಅತ್ತು ನಾಟಕವಾಡಿದ್ದ ಬಿಜೆಪಿ ನಾಯಕ

ಅಜ್ಮೀರ್: ರಾಜಸ್ಥಾನದ ಅಜ್ಮೀರ್ನಲ್ಲಿ (Ajmer, Rajasthan) ಪತ್ನಿಯನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಬಿಜೆಪಿ ನಾಯಕ (BJP Leader) ಮತ್ತು ಅವರ ಪ್ರೇಯಸಿಯನ್ನು ಬಂಧಿಸಲಾಗಿದೆ. ಪತ್ನಿ ಸಂಜುಳನ್ನು ಕೊಲೆ ಮಾಡಿದ ಆರೋಪದ ಮೇಲೆ ಬಿಜೆಪಿ ನಾಯಕ ರೋಹಿತ್ ಸೈನಿ (Rohit Saini) ಮತ್ತು ಪ್ರೇಯಸಿ ರಿತು ಸೈನಿ ಯನ್ನು ಬಂಧಿಸಲಾಗಿದೆ.

ಆಗಸ್ಟ್ 10 ರಂದು ಈ ಕೊ*ಲೆ ನಡೆದಿದೆ. ಕೆಲವು ಕಳ್ಳರು ಮನೆಗೆ ಪ್ರವೇಶಿಸಿ, ಸಂಜುನನ್ನು ಕೊಂದು ಅಮೂಲ್ಯ ಆಭರಣಗಳೊಂದಿಗೆ ಪರಾರಿಯಾಗಿದ್ದಾರೆ ಎಂದು ಪೊಲೀಸರು ಮುಂದೆ ಪ್ರಾಥಮಿಕ ಹೇಳಿಕೆಯನ್ನು ದಾಖಲಿಸಿದ್ದನು. ಪೊಲೀಸರು ಆಳವಾಗಿ ಪ್ರಶ್ನೆ ಮಾಡಲು ಪ್ರಾರಂಭಿಸಿದಾಗ ರೋಹಿತ್ ಸೈನಿ ಪದೇ ಪದೇ ತನ್ನ ಹೇಳಿಕೆಯನ್ನು ಬದಲಾಯಿಸುತ್ತಿದ್ದನು. ಇದರಿಂದ ಅನುಮಾನಗೊಂಡು ತೀವ್ರ ವಿಚಾರಣೆಗೆ ಒಳಪಡಿಸಿದಾಗ ರೋಹಿತ್ ಸೈನಿ ನಿಜಾಂಶ ಬಾಯ್ಬಿಟ್ಟಿದ್ದಾನೆ.
ಕಳ್ಳತನ, ಕೊ*ಲೆ ಎಂದು ಕಥೆ ಕಟ್ಟಿದ್ದ ರೋಹಿತ್ ಸೈನಿ
ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಪ್ರೇಯಸಿಯ ಒತ್ತಾಯದ ಮೇರೆಗೆ ರೋಹಿತ್ ಸೈನಿ ಪತ್ನಿಯನ್ನು ಕೊಲೆ ಮಾಡಿದ್ದು ಬೆಳಕಿಗೆ ಬಂದಿದೆ. ಆಗಸ್ಟ್ 10 ರಂದು ಸಂಜು ಶವ ಮನೆಯಲ್ಲಿ ಅನುಮಾನಸ್ಪಾದವಾಗಿ ಪತ್ತೆಯಾಗಿತ್ತು. ಅಪರಿಚಿತ ಕಳ್ಳರ ಗುಂಪೊಂದು ಕೊಲೆ ಮಾಡಿದೆ ಎಂಬ ಸುದ್ದಿಯೇ ಎಲ್ಲಡೆ ಬಿತ್ತರವಾಗಿತ್ತು. ಆದರೆ ರೋಹಿತ್ ಸೈನಿ ಹೇಳಿಕೆಯಲ್ಲಿನ ವ್ಯತ್ಯಾಸಗಳನ್ನು ಗಮನಿಸಿದ ಪೊಲೀಸರು ವಿಚಾರಣೆ ನಡೆಸಿದಾಗ ನಿಜಾಂಶ ಬಾಯ್ಬಿಟ್ಟಿದ್ದಾನೆ. ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರೇಯಸಿಗಾಗಿ ಪತ್ನಿಯ ಉಸಿರು ನಿಲ್ಲಿಸಿದ ಗಂಡ
ಪ್ರೇಯಸಿಗಾಗಿ ಪತ್ನಿಯನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ರೋಹಿತ್ ಮತ್ತು ರಿತು ದೀರ್ಘಕಾಲದಿಂದಿ ಪ್ರೀತಿಸುತ್ತಿದ್ದರು. ಒಟ್ಟಿಗೆ ಬಾಳಲು ಸಂಜು ಅಡ್ಡಿಯಾಗಿದ್ದರಿಂದ ರಿತುಳ ಒತ್ತಾಯದ ಮೇರೆಗೆ ರೋಹಿತ್ ಕೊಲೆ ಮಾಡಿದ್ದಾನೆ. ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸರು ಈಗ ಆರೋಪಿಗಳಿಬ್ಬರನ್ನೂ ಕೂಲಂಕಷವಾಗಿ ವಿಚಾರಣೆ ನಡೆಸುತ್ತಿದ್ದು, ಈ ಘಟನೆಯಲ್ಲಿ ಬೇರೆ ಯಾರಾದರೂ ಭಾಗಿಯಾಗಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ.
ಮದುವೆಯಾಗಿದ್ರೂ ರಿತು ಜೊತೆ ರಿಲೇಶನ್ಶಿಪ್
ಆರೋಪಿ ರೋಹಿತ್ ಸೈನಿ ತನ್ನ ತಪ್ಪನ್ನು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. ರಿತು ಮತ್ತು ರೋಹಿತ್ ದೀರ್ಘ ಸಮಯದಿಂದ ರಿಲೇಶನ್ಶಿಪ್ನಲ್ಲಿದ್ದರು. ರಿತು ಜೊತೆ ಜೀವನ ನಡೆಸಲು ಪತ್ನಿ ಅಡ್ಡಿಯಾಗಿದ್ದಳು. ಆಕೆಯನ್ನು ಮುಗಿಸುವಂತೆ ರಿತು ಒತ್ತಡ ಹಾಕುತ್ತಿದ್ದಳು. ಈ ಒತ್ತಡದಲ್ಲಿ ಸಿಲುಕಿದ್ದ ರೋಹಿತ್ ಪತ್ನಿಯನ್ನು ಕೊ*ಲೆಗೈದು, ಕಳ್ಳತನ ಎಂದು ಬಿಂಬಿಸಲು ಪ್ಲಾನ್ ಮಾಡಿಕೊಂಡಿದ್ದನು. ಪ್ರಮುಖ ಆರೋಪಿ ರೋಹಿತ್ ಸೈನಿಯನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಈ ಸಂಬಂಧ ಮುಂದಿನ ತನಿಖೆ ನಡೆಸಲಾಗುತ್ತಿದೆ ಎಂದು ಹೆಚ್ಚುವರಿ ಗ್ರಾಮೀಣ ಎಸ್ಪಿ ದೀಪಕ್ ಕುಮಾರ್ ಹೇಳಿದ್ದಾರೆ.