ಭೋಪಾಲ್ನ 90 ಡಿಗ್ರಿ ತಿರುವಿನ ರೈಲ್ವೆ ಮೇಲ್ಸೇತುವೆ ವೈರಲ್: ‘ಟೆಂಪಲ್ ರನ್’ ಸೇತುವೆ ಎಂದ ನೆಟ್ಟಿಗರು

ನವದೆಹಲಿ: ಭೋಪಾಲ್ (Bhopal) ನಲ್ಲಿ ನಿರ್ಮಿಸಲಾಗಿರುವ ವಿಚಿತ್ರ ರೀತಿಯ ರೈಲ್ವೆ ಮೇಲ್ಸೇತುವೆಯೊಂದು ( railway overbridge) ಸಾಮಾಜಿಕ ಜಾಲತಾಣದಲ್ಲಿ(Viral News) ಸಾಕಷ್ಟು ಮಂದಿಯ ಗಮನ ಸೆಳೆದಿದೆ. ಇದನ್ನು ನೋಡಿರುವ ಬಹುತೇಕ ಮಂದಿ ಮೊಬೈಲ್ ನಲ್ಲಿ ಜನಪ್ರಿಯವಾಗಿದ್ದ ಟೆಂಪಲ್ ರನ್ ಆಟ (Temple Run Game) ನೆನಪಿಸಿಕೊಂಡಿದ್ದಾರೆ.
ಭೋಪಾಲ್ ನ ಐಶ್ಬಾಗ್ ಕ್ರೀಡಾಂಗಣದ (Aishbagh Stadium) ಬಳಿ ನಿರ್ಮಿಸಲಾಗಿರುವ ಈ ಸೇತುವೆ 90 ಡಿಗ್ರಿ ತಿರುವನ್ನು ಹೊಂದಿದ್ದು, ಇದು ಕಾಮಗಾರಿಯ ನಿರ್ಲಕ್ಷ್ಯದಿಂದ ಆಗಿರಬಹುದು ಎಂದು ಬಹುತೇಕ ಮಂದಿ ಊಹಿಸಿದ್ದಾರೆ. ಆದರೆ ಇದಕ್ಕೆ ಸ್ಪಷ್ಟನೆ ನೀಡಿರುವ ಅಧಿಕಾರಿಗಳು ಈ ಪ್ರದೇಶದಲ್ಲಿ ಭೂಮಿಯ ಕೊರತೆ ಮತ್ತು ಮೆಟ್ರೋ ರೈಲು ನಿಲ್ದಾಣ ಹತ್ತಿರವಿರುವುದರಿಂದ ಹೀಗೆ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಭೋಪಾಲ್ನ ಐಶ್ಬಾಗ್ ಕ್ರೀಡಾಂಗಣದ ಬಳಿ ನಿರ್ಮಿಸಲಾಗಿರುವ 90 ಡಿಗ್ರಿಯ ರೈಲ್ವೆ ಮೇಲ್ಸೇತುವೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಅನೇಕರು ಇದನ್ನು ನೋಡಿ ಇದು ಮೊಬೈಲ್ ನಲ್ಲಿ ಜನಪ್ರಿಯವಾಗಿದ್ದ ಟೆಂಪಲ್ ರನ್ ಆಟದಂತಿದೆ ಎಂದು ಹೇಳಿದ್ದಾರೆ. ಅನೇಕರು ಇದು ಕಾಮಗಾರಿ ವೇಳೆ ನಡೆದ ನಿರ್ಲಕ್ಷ್ಯದಿಂದಾಗಿದೆ ಎಂದು ಆರೋಪಿಸಿದ್ದಾರೆ. ಆದರೆ ನಿರ್ಮಾಣಕ್ಕೆ ಸಂಬಂಧಿಸಿದ ಅಧಿಕಾರಿಗಳು ಈ ಪ್ರದೇಶದಲ್ಲಿ ಭೂಮಿಯ ಕೊರತೆ ಮತ್ತು ಹತ್ತಿರದಲ್ಲಿ ಮೆಟ್ರೋ ರೈಲು ನಿಲ್ದಾಣ ಇರುವುದರಿಂದ ಈ ರೀತಿ ನಿರ್ಮಿಸಲಾಗಿದೆ ಎಂದು ತಿಳಿಸಿದ್ದಾರೆ. ಇದು ಎಂಜಿನಿಯರಿಂಗ್ ದೋಷವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಐಶ್ಬಾಗ್ ಕ್ರೀಡಾಂಗಣದ ಬಳಿ ಇರುವ ರೈಲ್ವೆ ಮೇಲ್ಸೇತುವೆ ಸಮೀಪದಲ್ಲಿ ಮೆಟ್ರೋ ನಿಲ್ದಾಣವಿದೆ. ಈ ಕಾರಣದಿಂದ ಇಲ್ಲಿ ಭೂಮಿಯ ಕೊರತೆ ಇದೆ. ಹೀಗಾಗಿ ಬೇರೆ ಯಾವುದೇ ಆಯ್ಕೆಗಳು ಇರಲಿಲ್ಲ. ಈ ಮೇಲ್ಸೇತುವೆಯ ಮೇಲೆ ಕೇವಲ ಸಣ್ಣ ವಾಹನಗಳಿಗೆ ಚಲಿಸಲು ಅವಕಾಶವಿದೆ. ಭಾರೀ ವಾಹನಗಳಿಗೆ ಇದನ್ನು ಬಳಸಲು ಅವಕಾಶವಿಲ್ಲಾ ಎಂದು ಅವರು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಲೋಕೋಪಯೋಗಿ ಇಲಾಖೆ ಮುಖ್ಯ ಎಂಜಿನಿಯರ್ ವಿ.ಡಿ. ವರ್ಮಾ, ಈ ಮೇಲ್ಸೇತುವೆಯಲ್ಲಿ ಸಂಪೂರ್ಣ ಸುರಕ್ಷತೆಯನ್ನು ಪಾಲಿಸಲಾಗುತ್ತಿದೆ. ರಸ್ತೆ ನಿಯಮಗಳ ಪ್ರಕಾರ ವಾಹನಗಳ ವೇಗವನ್ನು ನಿರ್ವಹಿಸಲಾಗುತ್ತದೆ. 18 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಈ ಸೇತುವೆ ಇನ್ನೂ ಸಾರ್ವಜನಿಕರಿಗೆ ಬಳಕೆಗೆ ಲಭ್ಯವಾಗಿಲ್ಲ ಎಂದು ತಿಳಿಸಿದರು.
ಈ ಸೇತುವೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮಂದಿಯ ಕುತೂಹಲಕ್ಕೆ ಕಾರಣವಾಗಿದೆ. ಅನೇಕರು ಇದು ವಾಹನ ಚಾಲಕರಿಗೆ ಅಪಾಯಕಾರಿಯಾಗಬಹುದು ಎಂದು ಹೇಳಿದ್ದು, ಇನ್ನು ಕೆಲವರು ಇದು ಟೆಂಪಲ್ ರನ್ ಆಟದಂತಿದೆ ಎಂದು ಹೇಳಿದ್ದಾರೆ.
ಇದರೊಂದಿಗೆ ಈ ವರ್ಷದ ಆರಂಭದಲ್ಲಿ ಬಿಹಾರದಲ್ಲಿ ನಿರ್ಮಿಸಲಾದ ಗಡಿಯಾರ ಗೋಪುರದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅನೇಕರು ಚರ್ಚೆ ನಡೆಸಿದರು.
ಬಿಹಾರ ಶರೀಫ್ನಲ್ಲಿ ನಿರ್ಮಿಸಲಾದ ಗಡಿಯಾರ ಗೋಪುರವು ತರಾತುರಿಯಲ್ಲಿ ನಿರ್ಮಿಸಲಾಗಿತ್ತು. ಉದ್ಘಾಟನೆಯಾದ ಮರುದಿನವೇ ಗಡಿಯಾರ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿತು. ಇದರಲ್ಲಿರುವ ತಾಮ್ರದ ತಂತಿಗಳನ್ನು ಕಳ್ಳರು ಕದ್ದಿದ್ದರೆ ಎನ್ನಲಾಗುತ್ತಿದೆಯಾದರೂ ಕೆಲಸ ಪೂರ್ಣಗೊಳದೇ ಇರುವುದು ಇದಕ್ಕೆ ಮುಖ್ಯ ಕಾರಣವೂ ಹೌದು.