ಬೆಂಗಳೂರಿನಲ್ಲಿ ಬೆಟ್ಟಿಂಗ್ ಚಟಕ್ಕೆ ಬಿದ್ದು ಕಳ್ಳನಾದ ಟೆಕ್ಕಿ: ಅಪ್ಪನ ಆಸ್ತಿ ಮಾರಿ ಕೃತ್ಯಕ್ಕೆ ಇಳಿದಿದ್ದ ಸಾಫ್ಟ್ವೇರ್ ಇಂಜಿನಿಯರ್ ಬಂಧನ!

ಬೆಂಗಳೂರು : ಟೆಕ್ಕಿಯೊಬ್ಬ ತನ್ನ ಬೆಟ್ಟಿಂಗ್ ಚಟಕ್ಕೆ ಅಪ್ಪ ಮಾಡಿದ ಆಸ್ತಿಯನ್ನು ಮಾರಿ ಕಳ್ಳತನಕ್ಕೆ ಇಳಿದಿದ್ದ ವ್ಯಕ್ತಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಸಾಫ್ಟ್ವೇರ್ ಎಂಜಿನಿಯರನ್ನು ಮಾಗಡಿ ರೋಡ್ ಪೊಲೀಸರು ಬಂಧಿಸಿದ್ದು, ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.ಕೆ.ಎ.ಮೂರ್ತಿ (27) ಬಂಧಿತ ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದಾನೆ.

ಶಿವಮೊಗ್ಗ ಮೂಲದವನಾಗಿರುವ ಮೂರ್ತಿ, ಬೆಂಗಳೂರಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿ ಕೆಲಸ ಮಾಡ್ತಿದ್ದನು. ವಿಪರೀತ ಬೆಟ್ಟಿಂಗ್ ಚಟ ಬಿದ್ದು, ಕಂಪ್ಲೀಟ್ ಸಾಲ ಮಾಡಿಕೊಂಡಿದ್ದನು. ಹಣದಾಸೆಗೆ ಬಿದ್ದು ಕಳ್ಳತನ ಮಾಡ್ತಿದ್ದನು. ಹಣಕ್ಕಾಗಿ ಮನೆಗಳ್ಳತನ ಮಾಡ್ತಿದ್ದ. ಅಲ್ಲದೇ ಈ ಹಿಂದೆ ಅಂಗಾಳ ಪರಮೇಶ್ವರಿ ದೇವಸ್ಥಾನಕ್ಕೆ ಬಂದಿದ್ದ ಮಹಿಳೆಯ ಸರವನ್ನು ಕಿತ್ತಿದ್ದ ಎಂದು ಗೊತ್ತಾಗಿದೆ. ಸದ್ಯ ಮಾಗಡಿ ಪೊಲೀಸರು ವಿವಿಧ ಆಯಾಮಗಳಲ್ಲಿ ಟೆಕ್ಕಿ ತನಿಖೆ ನಡೆಸಿ ವಿಚಾರಣೆ ನಡೆಸುತ್ತಿದ್ದಾರೆ.