ಬೆಂಗಳೂರು: ಜ್ಞಾನಭಾರತಿಯ ಮಲ್ಲತ್ತಹಳ್ಳಿಯಲ್ಲಿ ಟೆಕ್ಕಿ ಮನೆಯಲ್ಲಿ ಭಾರಿ ಕಳ್ಳತನ – 1 ಕೆ.ಜಿ ಚಿನ್ನ, ₹4 ಲಕ್ಷ ನಗದು ಲಪಟ್!

ಬೆಂಗಳೂರು: ಮನೆಯಲ್ಲಿ ಯಾರು ಇಲ್ಲದ ಸಮಯ ನೋಡಿಕೊಂಡು 1 ಕೆಜಿ ಚಿನ್ನ, 4 ಲಕ್ಷ ರೂ. ನಗದು ಕಳ್ಳತನ (Theft) ಮಾಡಿರುವ ಘಟನೆ ಜ್ಞಾನಭಾರತಿಯ (Jnana Bharathi) ಮಲ್ಲತ್ತಹಳ್ಳಿಯಲ್ಲಿ (Mallattahalli) ನಡೆದಿದೆ.ಟೆಕ್ಕಿ ನಟೇಶ್ ಅವರ ಮನೆಯಲ್ಲಿ ಕಳ್ಳತನವಾಗಿದೆ. ಕಳೆದ ಶುಕ್ರವಾರ ನಟೇಶ್ ಅವರು ಮೈಸೂರಿಗೆ ತೆರಳಿದ್ದರು. ಬಳಿಕ ಶನಿವಾರ ವಾಪಸ್ ಬಂದು ನೋಡಿದಾಗ ಮನೆಯಲ್ಲಿದ್ದ 1 ಕೆ.ಜಿ ಚಿನ್ನ ಹಾಗೂ 4 ಲಕ್ಷ ರೂ. ನಗದು ಸೇರಿ ಬೆಲೆಬಾಳುವ ವಸ್ತುಗಳು ಕಳ್ಳತನವಾಗಿರುವುದು ಕಂಡುಬಂದಿದೆ.

ಸದ್ಯ ಈ ಸಂಬಂಧ ನಟೇಶ್ ಅವರು ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮನೆಯ ಅಕ್ಕಪಕ್ಕದ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿಗಳ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.