Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಬೆಂಗಳೂರು ನಗರ ಜೀವನ ದುಬಾರಿ; ‘ಖರ್ಚಿಗೆ ಅನುಗುಣವಾಗಿ ವೇತನ ಏರಿಕೆಯಾಗುತ್ತಿಲ್ಲ’ ಎಂದು ನಿರ್ದೇಶಕನ ಅಭಿಪ್ರಾಯ

Spread the love

ಬೆಂಗಳೂರು :ಬೆಂಗಳೂರಿನಲ್ಲಿ ಜೀವನ ವೆಚ್ಚವು ಗಗನಕ್ಕೇರುತ್ತಿದ್ದು, ಸಂಬಳದಲ್ಲಿ ಏರಿಕೆಯಿಲ್ಲದೆ ಮಧ್ಯಮ ವರ್ಗದ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಹಾಲು, ಡೀಸೆಲ್, ಮೆಟ್ರೋ ಟಿಕೆಟ್ ದರಗಳು ಹೆಚ್ಚಾಗಿದ್ದು, ಬಾಡಿಗೆ ದುಬಾರಿಯಾಗಿದೆ. ಆದರೆ ಸಂಬಳಗಳು ಏರಿಕೆಯಾಗುತ್ತಿಲ್ಲ ಎಂದಿರುವ ಕಂಪನಿಯೊಂದರ ನಿರ್ದೇಶಕರು, ಜೊತೆಗೆ ಹೆಚ್ಚುತ್ತಿರುವ ಟ್ರಾಫಿಕ್‌ನಿಂದ ನಗರದಲ್ಲಿ ಜೀವನ ಸವಾಲಾಗಿದೆ ಎಂದು ಹೇಳಿದ್ದಾರೆ.

ಬೆಂಗಳೂರು ನಗರ ಜೀವನಕ್ಕೆ ನಿಧಾನವಾಗಿ ದುಬಾರಿ ಆಗುತ್ತಿದೆ. ಇದು ಜನರ ಉಳಿತಾಯದ ಹಣವನ್ನು ಕರಗಿಸುತ್ತಿದೆ ಎಂದು ಕಂಪನಿಯೊಂದರ ನಿರ್ದೇಶಕರು ಹೇಳಿದ್ದಾರೆ. ಸಂಬಳ ಪಡೆಯುವ ಮಧ್ಯಮ ವರ್ಗದ ಜನರು ಹಣಕಾಸಿನ ತೊಂದರೆ ಅನುಭವಿಸುತ್ತಿದ್ದಾರೆ ಎಂದಿರುವ ಅವರು, ದಿನಸಿ, ಬಾಡಿಗೆ, ಪ್ರಯಾಣ ಎಲ್ಲದರ ಬೆಲೆ ಹೆಚ್ಚಾಗಿದೆ. ಆದರೆ ಆದಾಯ ಮಾತ್ರ ಹೆಚ್ಚಾಗುತ್ತಿಲ್ಲ ಎಂದು ಗಮನ ಸೆಳೆದಿದ್ದಾರೆ.

ಈ ಸಂಬಂಧ ಲಿಂಕ್ಡ್‌ಇನ್‌ನಲ್ಲಿ ಸಾಫ್ಟ್‌ವೇರ್ ಸಂಸ್ಥೆ ಸೆಯೋನ್‌ನ ನಿರ್ದೇಶಕ ಹರೀಶ್ ಎಎನ್ ಪೋಸ್ಟ್ ಹಾಕಿದ್ದಾರೆ. ಮಾರ್ಚ್ 7ರಂದು ಹಾಲಿನ ದರ ಲೀಟರ್‌ಗೆ 4 ರೂ. ಹೆಚ್ಚಾಯಿತು. ಈಗ ನಂದಿನಿ ಹಾಲಿನ ಒಂದು ಲೀಟರ್ ಪ್ಯಾಕೆಟ್ ಬೆಲೆ 47 ರೂ.ಗೆ ತಲುಪಿದೆ. ಮೊದಲು ಇದೇ ದರಕ್ಕೆ 1,050 ಎಂಲ್‌ ಇತ್ತು. ಏಪ್ರಿಲ್ 1 ರಂದು ಡೀಸೆಲ್ ಬೆಲೆ 2 ರೂ. ಏರಿಕೆಯಾಗಿದೆ. ಇದರಿಂದ ಲೀಟರ್‌ಗೆ 91.02 ರೂ. ಆಗಿದೆ. ಪ್ರಯಾಣ ಮಾಡಲು ಸಹ ಹೆಚ್ಚು ಹಣ ಬೇಕಾಗುತ್ತಿದೆ. ನಮ್ಮ ಮೆಟ್ರೋ ಟಿಕೆಟ್ ದರವನ್ನು ಫೆಬ್ರವರಿ 9 ರಂದು 60 ರಿಂದ 90 ರೂ.ಗೆ ಏರಿಸಿದ್ದಾರೆ. ವಿದ್ಯುತ್, ಕಸ ತೆರಿಗೆ, ಕಾಫಿ ಪುಡಿಯಂತಹ ಇತರ ವಸ್ತುಗಳ ಬೆಲೆಯೂ ಏರಿದೆ ಎಂದು ಅವರು ವಿವರಿಸಿದ್ದಾರೆ.

ಸಣ್ಣ ಊರುಗಳಿಂದ ಬೆಂಗಳೂರಿಗೆ ಬಂದ ಹೊಸಬರಿಗೆ ಪಿಜಿ ಬಾಡಿಗೆ, ಊಟ, ಪ್ರಯಾಣದ ಖರ್ಚುಗಳು ಹೆಚ್ಚಾಗಿವೆ ಎಂದು ಅವರು ಪರಿಸ್ಥಿತಿ ತೆರೆದಿಟ್ಟಿದ್ದಾರೆ.

ಬೆಂಗಳೂರಿನಲ್ಲಿ, “ಬೆಲೆಗಳು ಏರುತ್ತಿದ್ದರೂ, ಸಂಬಳ ಮಾತ್ರ ಹೆಚ್ಚಾಗಿಲ್ಲ. ಐಟಿ ಕ್ಷೇತ್ರದಲ್ಲಿ ವೇತನ ಹೆಚ್ಚಳ ಹಣದುಬ್ಬರವನ್ನು ಸರಿದೂಗಿಸಲು ಸಾಕಾಗುವುದಿಲ್ಲ,” ಎಂದು ಹರೀಶ್ ವಿವರಿಸಿದ್ದಾರೆ.

ಜೀವನ ನಡೆಸುವ ಖರ್ಚು ಮತ್ತು ಆದಾಯದ ನಡುವೆ ದೊಡ್ಡ ಅಂತರವಿದೆ ಎಂದು ತಿಳಿಸಿರುವ ಅವರು, “ಮಧ್ಯಮ ವರ್ಗದ ಜನರು ಭಾರೀ ತೊಂದರೆ ಅನುಭವಿಸುತ್ತಿದ್ದಾರೆ. ಬೆಲೆಗಳು ಹೆಚ್ಚಾಗುತ್ತಿದ್ದರೂ, ಆದಾಯ ಮಾತ್ರ ಏರಿಕೆಯಾಗುತ್ತಿಲ್ಲ. ಇದರಿಂದ ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ,” ಎಂದಿದ್ದಾರೆ.

ಇದೇ ವೇಳೆ ಇತರ ಸಮಸ್ಯೆಗಳ ಬಗ್ಗೆಯೂ ಬೆಳಕು ಚೆಲ್ಲಿರುವ ಅವರು, ಹೆಬ್ಬಾಳದಂತಹ ಪ್ರದೇಶಗಳಲ್ಲಿ ಟ್ರಾಫಿಕ್ ಜಾಸ್ತಿಯಾಗಿದ್ದು, ಪೀಕ್ ಅವಧಿಯಲ್ಲಿ ಎರಡು ಗಂಟೆಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ. ಆದರೆ, ಇಷ್ಟೆಲ್ಲಾ ಸಮಸ್ಯೆಗಳಿದ್ದರೂ, ಬೆಂಗಳೂರಿನ ಹವಾಮಾನ ಜನರನ್ನು ಆಕರ್ಷಿಸುತ್ತದೆ. ಇಲ್ಲಿನ ತಂಪಾದ ಗಾಳಿ ಮತ್ತು ಹಿತವಾದ ವಾತಾವರಣ ಆರಾಮ ನೀಡುತ್ತದೆ. “ಇದನ್ನು ಬಿಟ್ಟು ಹೋಗಲು ಕಷ್ಟ,” ಎಂದು ಅಭಿಪ್ರಾಯಪಟ್ಟಿದ್ದಾರೆ.

ಮುಂದುವರಿದು, “ಇದು ಕೇವಲ ಬೆಂಗಳೂರಿನ ಸಮಸ್ಯೆಯೇ ಅಥವಾ ಪ್ರಪಂಚದಾದ್ಯಂತದ ದೊಡ್ಡ ನಗರಗಳಲ್ಲಿ ಇದೇ ರೀತಿ ಆಗುತ್ತಿದೆಯೇ?” ಎಂದು ಅವರು ಪ್ರಶ್ನಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *