ಕುಡಿದಿರುವ ಆರೋಪಕ್ಕೆ ಬಾಲಕೃಷ್ಣನ ನೇರ ಸವಾಲು: ರಕ್ತಪರೀಕ್ಷೆ ಮಾಡಿ ಸಾಬೀತುಪಡಿಸಲಿ

ಮಂಗಳೂರು: ಚೈತ್ರಾ ಕುಂದಾಪುರ ಮೇಲೆ ಅವರ ತಂದೆ ಬಾಲಕೃಷ್ಣ ನಾಯ್ಕ್ ಅವರು ಸಾಕಷ್ಟು ಆರೋಪ ಮಾಡಿದ್ದಾರೆ. ಆ ಬಳಿಕ ‘ನಮ್ಮ ತಂದೆ ಕುಡುಕ’ ಎಂದು ಚೈತ್ರಾ ಅವರು ತಿರುಗೇಟು ನೀಡಿದರು.
ಆ ಮಾತಿಗೆ ಬಾಲಕೃಷ್ಣ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ನನಗೆ ಕುಡಿಯುವ ಅಭ್ಯಾಸ ಇದೆ ಎಂಬುದಾದರೆ ಊರಿನ ಜನರು ಹೇಳಲಿ. ವೈದ್ಯರಿಂದ ನನ್ನ ರಕ್ತಪರೀಕ್ಷೆ ಮಾಡಿ ಸಾಬೀತುಪಡಿಸಲಿ’ ಎಂದು ಬಾಲಕೃಷ್ಣ ಅವರು ನೇರವಾಗಿ ಸವಾಲು ಹಾಕಿದ್ದಾರೆ. ‘ಕುಡುಕ ಎಂಬ ಮಾತನ್ನು ನಾನು ಒಪ್ಪಲ್ಲ. ನಮ್ಮ ತಂದೆಯ ಕಾಲದಿಂದಲೂ ಯಾರೂ ಕುಡಿದಿಲ್ಲ. ಒಂದು ವೇಳೆ ಕುಡುಕ ಆಗಿದ್ದರೆ ನನಗೆ ಹೆಣ್ಣು ಕೊಡುತ್ತಿರಲಿಲ್ಲ’ ಎಂದು ಅವರು ಹೇಳಿದ್ದಾರೆ.