Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಬಾಗಲಕೋಟೆ: ಜ್ವರಕ್ಕೆ ದೆವ್ವ ಕಾರಣ ಎಂದ ಜ್ಯೋತಿಷಿ, ತಾಯಿಗೆ ₹17 ಲಕ್ಷ ಮೋಸ!

Spread the love

Ghost On Transparent PNG Images | PSD Free Download - Pikbest

ಬಾಗಲಕೋಟೆ: ಮಗುವಿಗೆ ಜ್ವರ ಬರಲು ದೆವ್ವ ಕಾರಣ ಎಂದು ನಂಬಿದ ತಾಯಿಯೊಬ್ಬಳು ಮಹಿಳಾ ಜ್ಯೋತಿಷಿಯಿಂದ ಲಕ್ಷಾಂತರ ರೂ. ವಂಚನೆಗೊಳಗಾಗಿದ್ದಾರೆ.ಹೌದು, ತನ್ನ ಹೆಣ್ಣು ಮಗುವಿಗೆ ಆಗಾಗ ಕಾಡುವ ಜ್ವರಕ್ಕೆ ಮದ್ದು ಕಂಡುಹಿಡಿಯಲು ತಾಯಿ ಜ್ಯೋತಿಷಿ ಮೊರೆ ಹೋಗಿದ್ದಾಳೆ. ದೂರದೂರಿನಲ್ಲಿ ಕುಳಿತ ಮಹಿಳಾ ಜ್ಯೋತಿಷಿ ಪೂಜೆ ಮಾಡಿರುವುದಾಗಿ ನಂಬಿಸಿ 17 ಲಕ್ಷ ರೂ. ಎಗರಿಸಿದ್ದಾರೆ.

ಭೂತದ ಭಯ:

ಅಂದ ಹಾಗೆ ಜಿಲ್ಲೆಯ ಮಹಿಳೆಯೊಬ್ಬರು ಇಂತಹ ವಂಚಕಿಯ ಮಾತಿಗೆ ಬಲಿಯಾಗಿದ್ದಾರೆ. ಖಾಸಗಿ ಸಂಸ್ಥೆಯೊಂದರ ಉದ್ಯೋಗಿಯಾಗಿರುವ 28 ವರ್ಷದ ಮಹಿಳೆಗೆ 2 ವರ್ಷದ ಮಗುವಿದೆ. ಮಗುವಿಗೆ ಆಗಾಗ ಜ್ವರ ಕಾಣಿಸಿಕೊಳ್ಳುತ್ತಿತ್ತು. ವೈದ್ಯರಿಂದ ಚಿಕಿತ್ಸೆ ಒದಗಿಸಿದಾಗಲೂ ಜ್ವರ ಕಡಿಮೆಯಾಗಿರಲಿಲ್ಲ. ಈ ಬಗ್ಗೆ ಮಹಿಳೆ ತನ್ನ ಕೋಲಾರಕ್ಕೆ ವಿಷಯ ತಿಳಿಸಿದ್ದಳು. ಆಗ ಸ್ನೇಹಿತೆ “ಮಹಾರಾಷ್ಟ್ರ ಜಿಲ್ಲೆಯ ಕೊಲ್ಲಾಪುರದಲ್ಲಿ ಜ್ಯೋತಿಷಿ ಮಹಿಳೆಯಿದ್ದಾರೆ. ಅವರ ಮೈಯಲ್ಲಿ ದೇವರು ಬರುತ್ತಾರೆ. ಅವರಿಗೆ ಸಂಪರ್ಕಿಸಿದರೆ ಜ್ವರ ಕಡಿಮೆಯಾಗುತ್ತದೆ” ಎಂದಿದ್ದಾರೆ. ಮಗುವಿನ ತಾಯಿ ಮೊಬೈಲ್ ಮೂಲಕ ಜ್ಯೋತಿಷಿ ಸಂಪರ್ಕಿಸಿದ್ದಾರೆ.

ಮಹಿಳೆಯೊಂದಿಗೆ ನಯವಾಗಿ ಮಾತನಾಡಿ, ಮಹಿಳಾ ಕುಟುಂಬದವರೊಬ್ಬರು ದೆವ್ವವಾಗಿದ್ದಾರೆ. ನಿನ್ನ ಮಗು ಹಾಗೂ ಕುಟುಂಬದವರಿಗೆ 2 ವರ್ಷ ಕಾಡುತ್ತಾರೆ. ದೆವ್ವ ಓಡಿಸಲು ವಿಶೇಷ ಪೂಜೆ ಮಾಡಬೇಕು” ಎಂದು ಹೇಳಿದ್ದಾರೆ. ಜ್ಯೋತಿಷಿ ಮಾತು ನಂಬಿದ ಮಹಿಳೆ ಮೊದಲು 1 ಲಕ್ಷ ರೂ. ಬ್ಯಾಂಕ್ ಮೂಲಕ ನೀಡಿದ್ದಾರೆ. ಪ್ರತಿ ದಿನ ಕರೆ ಮಾಡುತ್ತಿದ್ದ ಜ್ಯೋತಿಷಿ ಜ್ವರ ಕಡಿಮೆಯಾಯಿತಾ ಎಂದು ಪ್ರಶ್ನಿಸಿದ್ದಾರೆ. ಬೆಳಗ್ಗೆ ಕಾಣಿಸಿಕೊಳ್ಳುತ್ತಿದ್ದ ಜ್ವರ ಸಂಜೆ ಕಡಿಮೆಯಾಗುತ್ತಿತ್ತು. ಹೀಗಾಗಿ ಮಹಿಳೆ ಜ್ವರ ಕಡಿಮೆಯಾಗಿದೆ ಎಂದಿದ್ದಾರೆ.

ಮತ್ತಷ್ಟು ಹಣ ಹಾಕಿದರೆ ಪೂಜೆ, ಪುನಸ್ಕಾರ ಮಾಡುತ್ತೇನೆ ಎಂದ ಜ್ಯೋತಿಷಿ ಹೇಳಿ ಆಗಾಗ ಹಣಹಾಕಿಸಿಕೊಂಡಿದ್ದಾರೆ. ಇತ್ತ ಮಗು ಹುಷಾರಾಗದಿದ್ದಾಗ ಮಹಿಳೆಗೆ ಅನುಮಾನ ಬಂದು ವಿಚಾರಿಸಿದಾಗ ಸಮರ್ಪಕ ಉತ್ತರ ದೊರೆತಿಲ್ಲ.

ಆಗ ಮಹಿಳೆ ಬಾಗಲಕೋಟೆಯ ಸೈಬರ್ ಕೈಂ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ಪೊಲೀಸರು ಜ್ಯೋತಿಷಿಗಾಗಿ ಶೋಧನೆ ಆರಂಭಿಸಿದ್ದಾರೆ. ವಿಚಿತ್ರವೆಂದರೆ ಮೋಸ ಹೋದ ಮಹಿಳೆ ಈವರೆಗೂ ಜ್ಯೋತಿಷಿಯನ್ನು ಭೇಟಿ ಮಾಡಿಲ್ಲ. ಕೇವಲ ಮೊಬೈಲ್‌ನಲ್ಲಿ ಮಾತನಾಡಿದ್ದಾರೆ. ವಿಶ್ವಾಸ ಮೂಡಿಸುವ ಮಾತುಗಳನ್ನಾಡಿದ ಜ್ಯೋತಿಷಿ ಹಣ ಪಡೆದು ಮೌನವಾಗಿದ್ದಾರೆ.

ಸುಶಿಕ್ಷಿತರೂ ಇತ್ತೀಚೆಗೆ ಮೋಸದ ಜಾಲಗಳಿಗೆ ಬಲಿಯಾಗುತ್ತಿದ್ದಾರೆ. ಮೌಡ್ಯ, ಕಂದಾಚಾರ ನಂಬಿ ಹಣ ಕಳೆದುಕೊಳ್ಳಬಾರದು. ಅಪರಿಚಿತರೊಂದಿಗೆ ಹಣಕಾಸಿನ ವಹಿವಾಟು ನಡೆಸಬಾರದು ಎಂದಿದ್ದಾರೆ ಮಲ್ಲಿಕಾರ್ಜುನ ತುಳಸಿಗೇರಿ, ಸಿಪಿಐ, ಸೈಬ‌ರ್ ಕೈಂ ಠಾಣೆ


Spread the love
Share:

administrator

Leave a Reply

Your email address will not be published. Required fields are marked *