ಕುನಾಲ್ ಕಾಮ್ರಾ ಮೇಲೆ ಹಲ್ಲೆ – ಹೋಟೆಲ್ ಧ್ವಂಸ, 20 ಮಂದಿ ಅರೆಸ್ಟ್

ಶಿಂಧೆ ‘ದೇಶದ್ರೋಹಿ’ ಎಂದ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಮೇಲೆ ಅಟ್ಯಾಕ್! ಹೋಟೆಲ್ ಧ್ವಂಸ, 20 ಮಂದಿ ಅರೆಸ್ಟ್
ಕುನಾಲ್ ಕಾಮ್ರಾ ಅವರು ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಹೆಸರನ್ನು ಉಲ್ಲೇಖಿಸದೆ ಪರೋಕ್ಷವಾಗಿ ವ್ಯಂಗ್ಯವಾಗಿ ಹಾಡನ್ನು ಹಾಡಿದ್ರು. ಈ ಹಾಡಿನಲ್ಲಿ ದೇಶದ್ರೋಹಿ ಎಂಬ ಪದವೂ ಸೇರಿತ್ತು.
ಶಿವಸೇನೆ ಖಾರ್ನಲ್ಲಿರುವ ಯುನಿಕಾಂಟಿನೆಂಟಲ್ ಹೋಟೆಲ್ಗೆ ನುಗ್ಗಿ ಗಲಾಟೆ ಮಾಡಿ, ಹೋಟೆಲ್ನನ್ನೇ ಧ್ವಂಸ ಮಾಡಿದ್ದಾರೆ. ಕುನಾಲ್ ಕಮ್ರಾ ಅವರ ಕಾರ್ಯಕ್ರಮ ಇದೇ ಹೋಟೆಲ್ನಲ್ಲಿ ನಡೆಯುತ್ತಿತ್ತು. ಈ ಕಾರ್ಯಕ್ರಮದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ನಂತರ ಸೇನಾ ಕಾರ್ಯಕರ್ತರು ರೊಚ್ಚಿಗೆದ್ರು.
ಈ ವಿಡಿಯೋದಲ್ಲಿ, ಕುನಾಲ್ ಕಾಮ್ರಾ ಅವರು ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಹೆಸರನ್ನು ಉಲ್ಲೇಖಿಸದೆ ಪರೋಕ್ಷವಾಗಿ ವ್ಯಂಗ್ಯವಾಗಿ ಹಾಡನ್ನು ಹಾಡಿದ್ರು. ಈ ಹಾಡಿನಲ್ಲಿ ದೇಶದ್ರೋಹಿ ಎಂಬ ಪದವೂ ಸೇರಿತ್ತು. ಇದು ಕಾರ್ಯಕರ್ತರ ಕೋಪಕ್ಕೆ ಕಾರಣವಾಯ್ತು.