ಬಜೆಟ್ ನಲ್ಲಿ ಪುತ್ತೂರಿಗೆ ಮೆಡಿಕಲ್ ಕಾಲೇಜ್ ಸಂಭ್ರಮಿಸಿದ ಅಶೋಕ್ ರೈ ಮತ್ತು ಶಾಸಕರು

ಪುತ್ತೂರಿಗೆ ಹೊಸ ಮೆಡಿಕಲ್ ಕಾಲೇಜ್ ಘೋಷಣೆಯಾಗುತ್ತಿದ್ದಂತೆ ಕ್ಷೇತ್ರದಲ್ಲಿ ಹರ್ಷದ ಸಂಭ್ರಮ ಮನೆ ಮಾಡಿತು. ವಿಧಾನಸೌಧದ ಮುಂಭಾಗ ಶಾಸಕರಾದ ಅಶೋಕ್ ರೈಯವರನ್ನು ಕಾರ್ಯಕರ್ತರು ಹೆಗಲ ಮೇಲೆ ಹೊತ್ತುಕೊಂಡು ಸಂಭ್ರಮಿಸಿದರು. ಮೆಡಿಕಲ್ ಕಾಲೇಜ್ ಹೋರಾಟ ಸಮಿತಿಯ ಪದಾಧಿಕಾರಿಗಳು ಬೆಂಗಳೂರು ತೆರಳಿದ್ದು, ಅಲ್ಲಿಯೇ ಬಜೆಟ್ ಘೋಷಣೆಯ ನಂತರ ಕುಣಿದು ಕುಪ್ಪಳಿಸಿದರು. 100 ಹಾಸಿಗೆ ಸಾಮರ್ಥ್ಯದ ಪುತ್ತೂರು ತಾಲೂಕು ಆಸ್ಪತ್ರೆಯನ್ನು ಉನ್ನತೀಕರಿಸಿ ಮೆಡಿಕಲ್ ಕಾಲೇಜ್ ಸ್ಥಾಪಿಸಲಾಗುವುದೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ನಲ್ಲಿ ಘೋಷಿಸಿದರು.