ಔಷಧಿ ಖರೀದಿ ನೆಪದಲ್ಲಿ ಚಿನ್ನ ಕದ್ದವರ ಬಂಧನ!

ಮಂಗಳೂರು: ಮೆಡಿಕಲ್ ಶಾಪ್ನಲ್ಲಿ ಔಷಧಿ ಖರೀದಿಸುವ ನೆಪದಲ್ಲಿ ಚಿನ್ನದ ಕರಿಮಣಿ ಸರ ಎಗರಿಸಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಬದಿಯಡ್ಕ ಪೊಲೀಸರು ಬೆಂಗಳೂರುನಲ್ಲಿ ಬಂಧಿಸಿದ್ದಾರೆ.
ಬಂಧಿತರನ್ನು ಶಂಸುದ್ದೀನ್ ಅಸ್ಟರ್ ಅಲಿ (28) ಮತ್ತು ನೌಷಾದ್ ಬಿ.ಎ (37) ಎಂದು ಗುರುತಿಸಲಾಗಿದೆ.
ಜನವರಿ 11 ರಂದು ರಾಘವೇಂದ್ರ ಆಯುರ್ವೇದ ಮೆಡಿಕಲ್ನಲ್ಲಿ ಈ ಕಳವು ನಡೆದಿದ್ದು, ಸಿಸಿ ಟಿವಿ ಹಾಗೂ ಸೈಬರ್ ಸೆಲ್ ಮೂಲಕ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಕಳ್ಳತನ ಮಾಡಿದ್ದ ಚಿನ್ನದ ಸರವನ್ನು ಮಂಗಳೂರಿನ ಚಿನ್ನದ ಅಂಗಡಿಯಿಂದ ವಶಕ್ಕೆ ಪಡೆಯಲಾಗಿದೆ.