ಸುಹಾಸ್ ಶೆಟ್ಟಿ ಹತ್ಯೆ ಬಳಿಕ ಮತ್ತೊಂದು ದುರಂತ – ಯುವಕನಿಗೆ ಚಾಕು ಇರಿತ, ಮೂರು ಕಡೆ ಅಟ್ಯಾಕ್!

ಮಂಗಳೂರು : ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಕಿಚ್ಚು ಹೊತ್ತಿ ಉರಿಯುತ್ತಿರುವಾಗಲೇ ಮತ್ತೊಂದು ದುರಂತ ನಡೆದಿದೆ. ಮಂಗಳೂರು ಹೊರವಲಯದ ಕಣ್ಣೂರಿನಲ್ಲಿ ಯುವಕನಿಗೆ ಚಾಕುವಿನಿಂದ ಇರಿಯಲಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ. ಮಂಗಳೂರು ಮಾರುಕಟ್ಟೆಗೆ ಕೆಲಸಕ್ಕೆ ಹೋಗ್ತಿದ್ದ ಇರ್ಶಾದ್ ಎಂಬ ಯುವಕನ ಮೇಲೆ ಅಟ್ಯಾಕ್ ನಡೆದಿದೆ ವರದಿ ಆಗಿದೆ.
ಇರ್ಶಾದ್ ಎಂಬಾತ ಮೇಲೆ ಅಟ್ಯಾಕ್!
ಮಂಗಳೂರಿನ ಹೊರವಲಯದಲ್ಲಿ ಇರ್ಶಾದ್ ಎಂಬಾತ ಮೇಲೆ ಗುಂಪೊಂದು ಅಟ್ಯಾಕ್ ಮಾಡ್ತಿದ್ದಂತೆ ಆತ ಮನೆಯೊಂದಕ್ಕೆ ಓಡಿ ಹೋಗಿ ಜೀವ ಉಳಿಸಿಕೊಂಡಿದ್ದಾರೆ. ಈತನಿಗೆ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗ್ತಿದೆ.
ಮೂರು ಕಡೆಗಳಲ್ಲಿ ನಡೆದಿದೆ ಚಾಕು ಇರಿತ!
ಹಿಂದೂ ಸಂಘಟನೆ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ಬಳಿಕ ಹಲವೆಡೆ ಚೂರಿ ಇರಿತ ಪ್ರಕರಣ ದಾಖಲಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ. ಕಣ್ಣೂರು, ಕೊಂಚಾಡಿ, ಉಳ್ಳಾದಲ್ಲಿ ಚೂರಿ ಇರಿತವಾಗಿದ್ದು, ಘಟನೆಯಲ್ಲಿ ಮೂವರಿಗೆ ಗಾಯವಾಗಿದೆ. ತಡರಾತ್ರಿ ಮತ್ತು ಬೆಳ್ಳಂ ಬೆಳಗ್ಗೆ ಈ ಘಟನೆಗಳು ನಡೆದಿದೆ. ಮೂವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗ್ತಿದೆ.