Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಭಜರಂಗದಳದ ಭರತ್ ಕುಮ್ಡೇಲ್ ವಿರುದ್ಧ ಮತ್ತೆ ಟಾರ್ಗೆಟ್ ಪೋಸ್ಟ್

Spread the love

ಮಂಗಳೂರು:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಕೋಮುಗಲಭೆಯ ನೆತ್ತರು ಹರಿದಿದ್ದು, ಕೊಳತ್ತಮಜಲು ಜುಮ್ಮ ಮಸೀದಿ ಕಾರ್ಯದರ್ಶಿ ಪಿಕಪ್‌ ಚಾಲಕ ಅಬ್ದುಲ್‌ ರಹಿಮಾನ್‌ ಎಂಬಾತನನ್ನು ಕಿಡಿಗೇಡಿಗಳು ಬರ್ಬರವಾಗಿ ಹತ್ಯೆಗೈದಿದ್ದಾರೆ.

ನದಿಯಿಂದ ಮರಳು ತುಂಬಿಕೊಂಡು ಕುರಿಯಾಳ ಗ್ರಾಮದ ಈರಾ ಕೋಡಿಯ ರಾಜೀವಿ ಎಂಬುವವರ ಮನೆ ಬಳಿ ಇಳಿಸುವಾಗ ಏಕಏಕಿ ಬಂದ ದುಷ್ಕರ್ಮಿಗಳು ಡ್ರೈವರ್‌ ಸೀಟ್‌ನಲ್ಲಿದ್ದ ಅಬ್ದುಲ್‌ ರಹಿಮಾನ್‌ ಅವರನ್ನು ಹೊರಗೆಳೆದು ಮಾರಕಾಸ್ತ್ರಗಳಿಂದ ಕೊಚ್ಚಿದ್ದಾರೆ.

ತಡೆಯಲು ಹೊರಟ ಪಿಕಪ್‌ ವಾಹದಲ್ಲಿದ್ದ ರಹಿಮಾನ್‌ ಸ್ನೇಹಿತ ಕಲಂದರ್ ಶಾಫಿಗೂ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದು ಈತ ನೀಡಿದ ಹೇಳಿಕೆ ಪ್ರಕಾರ ದೀಪಕ್‌, ಸುಮಿತ್‌ ಸೇರಿ 15 ಜನರ ವಿರುದ್ಧ ದೂರು ದಾಖಲಾಗಿದೆ.

ಅಲ್ಲದೇ ಈ ದೀಪಕ್‌ ಹಾಗೂ ಸುಮಿತ್‌ಗೆ ಹತ್ಯೆಗೀಡಾದ ಅಬ್ದುಲ್‌ ರಹಿಮಾನ್‌ ಪರಿಚಯವಿದ್ದರು ಎನ್ನಲಾಗಿದ್ದ್, ‍ಕೃತ್ಯಕ್ಕೆ ಕಾರಣವೇನೆಂಬುದು ಆರೋಪಿಗಳ ಬಂಧನದ ಬಳಿಕ ಹೊರಬರಲಿದೆ.

ಒಂದೆಡೆ ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದರೆ ಮತ್ತೊಂದೆಡೆ ಟಾರ್ಗೆಟ್‌ ಬಾಯ್‌ ಹಾಗೂ ಟೀಮ್‌ ಟಾರ್ಗೆಟ್‌ ಎಂಬ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಭಜರಂಗದಳದ ಮಖಂಡ ಭರತ್‌ ಕುಮ್ಡೇಲ್‌ ಫೋಟೊ ಹಾಕಿ ಟಾರ್ಗೆಟ್‌ ಇಮೋಜಿ ಬಳಸಿ, ಕುತ್ತಿಗೆ ಬಳಿ ಕತ್ತಿಯ ಚಿತ್ರಗಳನ್ನೂ ಸಹ ಹಾಕಿ ಕೊಲೆ ಬೆದರಿಕೆ ಹಾಕಿದ್ದಾರೆ.

ಈ ಹಿಂದೆಯೂ ಭರತ್‌ ವಿರುದ್ಧ ಇದೇ ರೀತಿ ಪೋಸ್ಟ್‌ಗಳು ಹರಿದಾಡುತ್ತಿದ್ದವು. ಆದರೆ ಪೊಲೀಸ್‌ ಪ್ರಕರಣ ದಾಖಲಾದ ಬಳಿಕ ಎಲ್ಲವೂ ಸೈಲೆಂಟ್‌ ಆಗಿತ್ತು. ಇದೀಗ ಅಬ್ದುಲ್‌ ರಹಿಮಾನ್‌ ಹತ್ಯೆ ಬಳಿಕ ಮತ್ತೆ ಟಾರ್ಗೆಟ್‌ ಪೋಸ್ಟ್‌ ಶುರುವಾಗಿದೆ.


Spread the love
Share:

administrator

Leave a Reply

Your email address will not be published. Required fields are marked *