Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಶಿಕ್ಷಕರು ಬೈದಿದ್ದಕ್ಕೆ ಆಕ್ರೋಶ; ಹತ್ತನೇ ತರಗತಿ ಬಾಲಕನಿಂದ ಶಿಕ್ಷಕನ ಮೇಲೆ ಅಟ್ಯಾಕ್

Spread the love

ಆಂಧ್ರಪ್ರದೇಶ: ವಿದ್ಯಾರ್ಥಿಗಳಿಗೆ ಹೊಡೆದು ಬುದ್ಧಿ ಹೇಳಿ ಪಾಠ ಕಲಿಸುವುದು ಹಾಗಿರಲಿ, ಈಗಿನ ಮಕ್ಕಳು ಶಿಕ್ಷಕರ ಮೇಲೆ ಹಲ್ಲೆ ನಡೆಸುವಷ್ಟರ ಮಟ್ಟಿಗೆ ಹೋಗಿದ್ದಾರೆ ಎನ್ನುವುದೇ ಆತಂಕಕಾರಿ ಸಂಗತಿಯಾಗಿದೆ. ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ವೀರವಳ್ಳಿಯ ಶಾಲೆಯೊಂದರಲ್ಲಿ 10ನೇ ತರಗತಿ ವಿದ್ಯಾರ್ಥಿಯೊಬ್ಬ ಶಿಕ್ಷಕರು ಬೈದರೆಂದು ಅವರ ಮೇಲೆ ಹಲ್ಲೆ ನಡೆಸಿರುವ ವಿಡಿಯೋ ವೈರಲ್ ಆಗಿದೆ. ಶಿಕ್ಷಕರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಾರೆ, ಮಕ್ಕಳ ಭವಿಷ್ಯವನ್ನು ರೂಪಿಸುತ್ತಾರೆ. ಆದರೆ ಅವರ ಬೆಲೆ ಗೊತ್ತಿಲ್ಲದ್ದ ವಿದ್ಯಾರ್ಥಿಗಳು ಇಂಥಾ ತಪ್ಪು ಮಾಡಿಬಿಡುತ್ತಾರೆ.
ಇಂತಹ ನಡವಳಿಕೆಯು ಕಲಿಕಾ ವಾತಾವರಣವನ್ನು ಹಾನಿಗೊಳಿಸುವುದಲ್ಲದೆ ಸಮಾಜಕ್ಕೆ ಅಪಾಯಕಾರಿ ಸಂದೇಶವನ್ನು ರವಾನಿಸುತ್ತದೆ.ವಿದ್ಯಾರ್ಥಿಗಳು ಅಧ್ಯಯನದ ಮೇಲೆ ಕೇಂದ್ರೀಕರಿಸಬೇಕಾದ ಮತ್ತು ಉತ್ತಮ ಭವಿಷ್ಯವನ್ನು ನಿರ್ಮಿಸಬೇಕಾದ ವಯಸ್ಸಿನಲ್ಲಿ, ವ್ಯಸನ ಮತ್ತು ಹಿಂಸಾತ್ಮಕ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುವುದು ತೀವ್ರ ಕಳವಳಕಾರಿಯಾಗಿದೆ.ಶಿಕ್ಷಕರನ್ನು ಗೌರವಿಸುವುದು ಆರೋಗ್ಯಕರ ಶಿಕ್ಷಣ ವ್ಯವಸ್ಥೆಯ ಅಡಿಪಾಯವಾಗಿದೆ ಮತ್ತು ಅಂತಹ ಹಿಂಸಾಚಾರವನ್ನು ಎಂದಿಗೂ ಸಹಿಸಬಾರದು.


Spread the love
Share:

administrator

Leave a Reply

Your email address will not be published. Required fields are marked *