ಉದ್ವಿಗ್ನ ಗಡಿ ಪರಿಸ್ಥಿತಿ ನಡುವೆ ಅಗ್ನಿವೀರರಿಗೆ ವೈಮಾನಿಕ ದಾಳಿತಡೆಗೆ ತರಬೇತಿ: ಸೇನೆಯ ತ್ವರಿತ ಮುನ್ನೆಚ್ಚರಿಕೆ ಕ್ರಮ

ದೆಹಲಿ: ಭಾರತ ಮತ್ತು ಪಾಕಿಸ್ತಾನದ ನಡುವಿನ ಗಡಿಭಾಗದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಭಾರತೀಯ ಸೇನೆ ತಕ್ಷಣ ಕ್ರಮ ಕೈಗೊಂಡಿದ್ದು, ಅಗ್ನಿವೀರರಿಗೆ ವೈಮಾನಿಕ ಬೆದರಿಕೆಗೆ ತಡೆ ನೀಡುವ ತರಬೇತಿಯನ್ನು ನೀಡುತ್ತಿದೆ.
ವೈಮಾನಿಕ ದಾಳಿಗಳು, ಶತ್ರು ತಂತ್ರಗಳನ್ನು ಎದುರಿಸಲು ಅಗ್ನಿವೀರರ ಕೌಶಲ್ಯವನ್ನು ಬೆಳೆಸಲಾಗುತ್ತಿದೆ. ಈ ತರಬೇತಿಯ ವಿಡಿಯೋವನ್ನು ಭಾರತದ ರಕ್ಷಣಾ ಇಲಾಖೆ ಬಿಡುಗಡೆ ಮಾಡಿದ್ದು, ಸೇನೆಯ ಸಜ್ಜತೆ ಮತ್ತು ತಂತ್ರಜ್ಞಾನ ಸಂಯೋಜಿತ ಭದ್ರತಾ ದೃಷ್ಟಿಕೋನವನ್ನು ಹೈಲೈಟ್ ಮಾಡಿದೆ.
ಸದ್ಯ ಗಡಿಭಾಗದಲ್ಲಿ ಹೆಚ್ಚುತ್ತಿರುವ ಸೇನಾ ಚಟುವಟಿಕೆ ಮತ್ತು ಯುದ್ಧೋತ್ಪನ್ನ ಪರಿಸ್ಥಿತಿಯನ್ನು ಎದುರಿಸಲು ಇದೊಂದು ತ್ವರಿತ ಮುನ್ನೆಚ್ಚರಿಕೆ ಕ್ರಮವಾಗಿದೆ ಎಂದು ಸೇನೆ ತಿಳಿಸಿದೆ.