ಜಿಪ್ಲೈನ್ ಸವಾರಿ ಮೊದಲು ‘ಅಲ್ಲಾ ಹು ಅಕ್ಬರ್’- ನಿರ್ವಾಹಕನ ಅನುಮಾನಾಸ್ಪದ ವರ್ತನೆ

ಶ್ರೀನಗರ:ಪಹಲ್ಗಾಂ ಉಗ್ರ ದಾಳಿ ಹಿಂದೆ ಸ್ಥಳೀಯರ ಕುಮ್ಮಕ್ಕಿನ ಶಂಕೆ ವ್ಯಕ್ತವಾಗಿರುವ ನಡುವೆಯೇ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು ಅದರಲ್ಲಿ ಪ್ರವಾಸಿಗರೊಬ್ಬರನ್ನು ಜಿಪ್ಲೈನ್ ಸವಾರಿಗೆ ಕಳುಹಿಸುವ ಮುನ್ನವೇ ಗುಂಡಿನ ಸದ್ದು ಕೇಳಿಸಿದರೂ ನಿರ್ವಾಹಕ ಅಲ್ಲಾ ಹು ಅಕ್ಬರ್ ಕೂಗಿ ಸುಮ್ಮನಾಗಿರುವುದು ಸೆರೆಯಾಗಿದ್ದಾರೆ.
ಇದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.
ಗುಜರಾತ್ ಮೂಲದ ಪ್ರವಾಸಿಗರನ್ನು ಜಿಪ್ಲೈನ್ ಸವಾರಿಗೆ ಕಳುಹಿಸುವಾಗ ನಿರ್ವಾಹಕ ಹಿಂದಿನಿಂದ ಗುಂಡಿನ ಸದ್ದು ಕೇಳಿಸಿದೆ. ಮಾತ್ರವಲ್ಲದೇ ಅಷ್ಟರಲ್ಲಾಗಲೇ ಭಯೋತ್ಪಾದಕ ದಾಳಿಗೆ ಬೆದರಿ ಪ್ರವಾಸಿಗರು ಅಲ್ಲಿಂದ ಭಯದಿಂದ ಓಡಲು ಶುರು ಮಾಡಿದ್ದರು.
ಹೀಗಿದ್ದರೂ ಜಿಪ್ಲೈನ್ ನಿರ್ವಾಹಕ ಪ್ರವಾಸಿಗರನ್ನು ರಕ್ಷಿಸಿದೇ ಅಲ್ಲಾ ಹು ಅಕ್ಬರ್ ಎಂದು ಘೋಷಣೆ ಕೂಗಿ ಸುಮ್ಮನಾಗಿದ್ದಾನೆ. ಇದು ವಿಡಿಯೋದಲ್ಲಿ ಸೆರೆಯಾಗಿದ್ದು, ಇದನ್ನು ನೋಡಿದ ಬಹುತೇಕರು ಅಲ್ಲಿ ಉಗ್ರ ದಾಳಿ ನಡೆಯುವುದು ಆ ನಿರ್ವಾಹಕನಿಗೆ ಮೊದಲೇ ಗೊತ್ತಿತ್ತು ಎಂದು ಕಾಣುತ್ತಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ ಅಹಮದಾಬಾದ್ ಮೂಲದ ಪ್ರವಾಸಿಗ ಗುಂಡಿನ ದಾಳಿಯ ಅರಿವಿಲ್ಲದೇ ಜಪ್ಲೈನ್ ಸವಾರಿ ಪೂರ್ಣಗೊಳಿಸಿದ್ದಾನೆ. ಈ ವೇಳೆ ಆತ ಮಾಡಿದ ಸೆಲ್ಫಿ ವಿಡಿಯೋದಲ್ಲಿ ಉಗ್ರರ ದಾಳಿ, ಪ್ರಯಾಣಿಕರು ಓಡುತ್ತಿರುವ ದೃಶ್ಯ ಸೆರೆಯಾಗಿದೆ.
ಜಿಪ್ಲೈನ್ ಮೂಲಕ ವಿಡಿಯೋ ಮಾಡುತ್ತಾ ಸಾಗಿದ ಪ್ರವಾಸಿಗೆ ಕೆಲ ಹೊತ್ತಿನಲ್ಲಿ ಉಗ್ರ ದಾಳಿ ಅರಿವಾಗಿದೆ. ಜಿಪ್ಲೈನ್ ಸವಾರಿ ಅಂತ್ಯಗೊಂಡ ಬೆನ್ನಲ್ಲೇ ಛಂಗನೆ ಹಾರಿ ಕುಟುಂಬದತ್ತ ಧಾವಿಸಿದ್ದಾನೆ. ಬಳಿಕ ಒಂದಂಡೆ ಉಗ್ರರು ಹಂತ ಹಂತವಾಗಿ ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸುತ್ತಿದ್ದರೆ, ಮತ್ತೊಂದೆಡೆ ಪತ್ನಿ ಹಾಗೂ ಕುಂಟಬವನ್ನು ಕರೆದುಕೊಂಡು ಓಡಲು ಶುರುು ಮಾಡಿದ್ದಾನೆ. ಮುಖ್ಯದ್ವಾರ ಬಳಿ ಬಂದಾಗ ಸ್ಥಳೀಯರೊಬ್ಬರು ನೆರವು ನೀಡಿದ್ದಾರೆ. ನೆರವಿನಿಂದ ಆದಷ್ಟು ಬೇಗ ದಾಳಿ ನಡೆಯುವ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಈ ವೇಳೆ ಭಾರತೀಯ ಸೇನೆ ನೆರವಿಗೆ ಧಾವಿಸಿದೆ. ಗುಂಡಿನ ದಾಳಿ ನಡೆದ 25 ನಿಮಿಷದಲ್ಲಿ ಭಾರತೀಯ ಸೇನೆ ಆಗಮಿಸಿ ಹಲವರನ್ನು ರಕ್ಷಿಸಿದೆ ಎಂದು ಪ್ರವಾಸಿಗ ಹೇಳಿದ್ದಾನೆ.