ಅಕಸ್ಮಿಕ ಬೆಂಕಿಯಿಂದ ಎಲ್ಲಾ ಮಡಿಕೆಗಳು ನಾಶ: ಸರ್ಕಾರದಿಂದ ನೆರವಿನ ನಿರೀಕ್ಷೆ

ಬಾಗಲಕೋಟೆ : ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯ ಕುಂಬಾರ ಓಣಿಯ ಶ್ರೀಮತಿ ಶೋಭಾ ಸದಾಶಿವ ಕುಂಬಾರ ಒಡೆತನಕ್ಕೆ ಸೇರಿದ ಶಡ್ಗಳ ಮತ್ತು ಶೇಡ್ಡಿನಲ್ಲಿ ಕುಂಬಾರರು ಮಾಡಿದ ಮಣ್ಣಿನ ಮಡಿಕೆಗಳು ಹಾಗೂ ವಿವಿಧ ವಸ್ತುಗಳು ಸುಮಾರು ಸುಟ್ಟು ಕರಕಲಾಗಿದೆ.
ನಿನೇ ರಾತ್ರಿ 9:00 ಸುಮಾರಿಗೆ ಆಕಸ್ಮಿಕ ಬೆಂಕಿ ತಗಲಿ ಒಂದು ಲಕ್ಷಕ್ಕೂ ಅಧಿಕ ವಸ್ತುಗಳು ಸುಟ್ಟು ಕರಕಲಾಗಿವೆ.ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಒಟ್ಟಾರಿಯಾಗಿ ಮಡಿಕೆಗಳನ್ನ ನಂಬಿ ಜೀವನ ಸಾಗಿಸುತ್ತಿದ್ದ ಶೋಭಾ ಸದಾಶಿವ ಕುಂಬಾರ ಕುಟುಂಬ ಈಗ ಬೀದಿಗೆ ಬಿದ್ದಂತಾಗಿದೆ.
ಕೂಡಲೆ ಸರ್ಕಾರ ನೊಂದ ಕುಟುಂಬಕ್ಕೆ ಸಹಾಯ ಮಾಡಬೇಕೆಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಯಾವುದೇ ಸರ್ಕಾರ ಇಲ್ಲಿಯವರೆಗೂ ಕುಂಬಾರರಿಗೆ ಸರ್ಕಾರಿ ಸೌಲತ್ತನ ನೀಡಿದೆ ಇರುವುದು ಒಂದು ಕಡೆ ಬೇಸರ ಆದರೆ ಮತ್ತೊಂದು ಕಡೆ ಮಣ್ಣಿನ ಮಡಿಕೆ ಮತ್ತು ವಲಿಗಳನ್ನು ನಂಬಿ ಜೀವನ ಸಾಗಿಸುವ ಸಮಯದಲ್ಲಿ ಆಕಸ್ಮಿಕ ಬೆಂಕಿ ತಗಲಿ ಸಂಪೂರ್ಣವಾಗಿ ನಾಶವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.