Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಪ್ರಯಾಣಿಕರೆಲ್ಲಾ ಸುಟ್ಟುಬೂದಿಯಾದ್ರು ಒಬ್ಬ ಮಾತ್ರ ಬದುಕುಳಿದ! ವಿಶ್ವಾಸ್‌ ಪಾರಾಗಿದ್ದೇಗೆ?

Spread the love

ಅಹಮದಾಬಾದ್‌ನಲ್ಲಿ ಏರ್ ಇಂಡಿಯಾ ವಿಮಾನ ದುರಂತ ಸಂಭವಿಸಿದ್ದು, ವಿಮಾನದಲ್ಲಿದ್ದ ಪ್ರಯಾಣಿಕರೆಲ್ಲರೂ ಸಾವನ್ನಪ್ಪಿದ್ದಾರೆ. ಆದರೆ ವಿಶ್ವಾಸ್ ಕುಮಾರ್ ರಮೇಶ್ ಎಂಬ ಬ್ರಿಟಿಷ್ ಪ್ರಜೆ ಮಾತ್ರ ಪವಾಡಸದೃಶ್ಯವಾಗಿ ಬದುಕುಳಿದಿದ್ದಾರೆ. ಲಂಡನ್‌ಗೆ ತೆರಳುತ್ತಿದ್ದ ವಿಮಾನವು ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿತು. ಗಾಯಗೊಂಡಿರುವ ವಿಶ್ವಾಸ್, ತನ್ನ ಸಹೋದರ ಅಜಯ್‌ಗಾಗಿ ಹುಡುಕಾಟ ನಡೆಸುವಂತೆ ಮನವಿ ಮಾಡಿದ್ದಾರೆ.

ಅಹಮದಾಬಾದ್: ಗುಜರಾತ್‌ನ ಅಹಮದಾಬಾದ್‌ನಲ್ಲಿ ಏರ್‌ ಇಂಡಿಯಾ ವಿಮಾನ ದುರಂತದಲ್ಲಿ ಪ್ರಯಾಣಿಕರೆಲ್ಲಾ ಸುಟ್ಟು ಬೂದಿಯಾಗಿದ್ದು, ಒಬ್ಬ ಪ್ರಯಾಣಿಕ ಮಾತ್ರ ಪವಾಡಸದೃಶವಾಗಿ ಪಾರಾಗಿದ್ದಾನೆ. ಸದ್ಯ ಆತನನ್ನು ದೇವರ ಪುತ್ರ, ಮೃತ್ಯುಂಜಯ, ಸಾವು ಗೆದ್ದ ಶೂರ ಎಂದೆಲ್ಲಾ ಕರೆಯುತ್ತಿದ್ದಾರೆ.

ಗುರುವಾರ ಮಧ್ಯಾಹ್ನ ಅಹಮದಾಬಾದ್‌ನ ಸರ್ದಾರ್‌ ವಲ್ಲಭಬಾಯಿ ಪಟೇಲ್‌ ಏರ್‌ಪೋರ್ಟ್‌ನಿಂದ ಹೊರಟ ಏರ್‌ ಇಂಡಿಯಾ ವಿಮಾನವು ಟೇಕಾಫ್‌ ಆದ ಕೆಲ ನಿಮಿಷಗಳಲ್ಲಿ ಪತನವಾಗಿದೆ. ಈ ವಿಮಾನ ದುರಂತದಲ್ಲಿ 40 ವರ್ಷದ ವಿಶ್ವಾಸ್‌ ಕುಮಾರ್ ರಮೇಶ್‌ ಎಂಬುವವರು ಬದುಕುಳಿದಿದ್ದಾರೆ.

ಭಾರತ ಮೂಲದವರಾದರೂ ವಿಶ್ವಾಸ್ ಕುಮಾರ್‌ ರಮೇಶ್‌ ಬ್ರಿಟಿಷ್ ಪ್ರಜೆಯಾಗಿದ್ದು, ಲಂಡನ್‌ನಿಂದ ಕುಟುಂಬವನ್ನು ನೋಡಲು ಗುಜರಾತ್‌ಗೆ ಬಂದಿದ್ದರು. ತಮ್ಮ ಸಹೋದರ ಅಜಯ್ ಕುಮಾರ್ ರಮೇಶ್ ಅವರೊಂದಿಗೆ ವಾಪಸ್‌ ಲಂಡನ್‌ಗೆ ತೆರಳುತ್ತಿದ್ದರು. ಎ 11 ಸೀಟ್‌ನಲ್ಲಿ ಅವರು ಕುಳಿತು ಪ್ರಯಾಣ ಮಾಡುತ್ತಿದ್ದರು. ಅದೃಷ್ಟವಶಾತ್‌ ಪಾರಾಗಿದ್ದು, ಅವರ ಎದೆ, ಕಣ್ಣು ಮತ್ತು ಕಾಲುಗಳಿಗೆ ಗಾಯಗಳಾಗಿವೆ.

ನನ್ನ ಸುತ್ತಲೂ ಮೃತದೇಹಗಳಿದ್ದವು ಎಂದ ವಿಶ್ವಾಸ್

” ಟೇಕ್ ಆಫ್ ಆದ 30 ಸೆಕೆಂಡುಗಳ ನಂತರ, ಜೋರಾದ ಶಬ್ದ ಕೇಳಿಸಿತು. ತಕ್ಷಣವೇ ವಿಮಾನವು ಪತನಗೊಂಡಿತು. ಎಲ್ಲವೂ ಕ್ಷಣಾರ್ಧದಲ್ಲಿ ಸಂಭವಿಸಿತು . ನಾನು ಎದ್ದಾಗ, ನನ್ನ ಸುತ್ತಲೂ ಮೃತದೇಹಗಳು ಬಿದ್ದಿದ್ದವು. ನಾನು ಹೆದರಿದೆ. ಎದ್ದು ಓಡಿದೆ. ವಿಮಾನದ ತುಂಡುಗಳು ಎಲ್ಲೆಡೆ ಬಿದ್ದಿದ್ದವು. ಯಾರೋ ನನ್ನನ್ನು ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದುಕೊಂಡ ಬಂದರು ” ಎಂದು ವಿಶ್ವಾಸ್ ಕುಮಾರ್‌ ರಮೇಶ್‌ ಹೇಳಿದ್ದಾರೆ.

ವಿಶ್ವಾಸ್ ಕಳೆದ 20 ವರ್ಷಗಳಿಂದ ಲಂಡನ್‌ನಲ್ಲಿ ವಾಸಿಸುತ್ತಿದ್ದಾರೆ. ಅವರ ಪತ್ನಿ ಮತ್ತು ಮಗು ಕೂಡ ಲಂಡನ್‌ನಲ್ಲಿಯೇ ಇದ್ದಾರೆ. ” ವಿಮಾನದಲ್ಲಿ ತಮ್ಮ ಸಹೋದರ ಅಜಯ್ ಬೇರೆ ಸಾಲಿನಲ್ಲಿ ಕುಳಿತಿದ್ದರು. ನಾವು ದಿಯುಗೆ ಭೇಟಿ ನೀಡಿದ್ದೆವು. ಅವರು ನನ್ನೊಂದಿಗೆ ಪ್ರಯಾಣಿಸುತ್ತಿದ್ದರು. ಆದರೆ ಈಗ ಅವರನ್ನು ಹುಡುಕಲು ಸಾಧ್ಯವಾಗುತ್ತಿಲ್ಲ. ದಯವಿಟ್ಟು ಅವರನ್ನು ಹುಡುಕಲು ಸಹಾಯ ಮಾಡಿ” ಎಂದು ವಿಶ್ವಾಶ್‌ ಆಸ್ಪತ್ರೆಯಲ್ಲಿ ಮನವಿ ಮಾಡುತ್ತಿದ್ದರು.

242 ಮಂದಿ ವಿಮಾನದಲ್ಲಿ ಪ್ರಯಾಣ

ಗುರುವಾರ ಮಧ್ಯಾಹ್ನ 1.39ಕ್ಕೆ ಲಂಡನ್‌ಗೆ ಹೊರಟಿದ್ದ ವಿಮಾನವು ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಅನಾಹುತಕ್ಕೆ ತುತ್ತಾಯಿತು. ವಿಮಾನದಲ್ಲಿ 242 ಜನರಿದ್ದರು. ಅವರಲ್ಲಿ 169 ಭಾರತೀಯರು, 53 ಬ್ರಿಟಿಷ್ ಪ್ರಜೆಗಳು, 7 ಪೋರ್ಚುಗೀಸ್ ಮತ್ತು ಒಬ್ಬರು ಕೆನಡಾ ಪ್ರಜೆಯಿದ್ದರು.


Spread the love
Share:

administrator

Leave a Reply

Your email address will not be published. Required fields are marked *