ಮಮತಾ ಕುಲಕರ್ಣಿಯ ಮಹಾಮಂಡಲೇಶ್ವರ ಹುದ್ದೆಗೆ ಅಖಾಡದ ತಿರಸ್ಕಾರ, ಪಟ್ಟದಲ್ಲಿ ಮುಂದುವರಿಕೆ

ಪ್ರಯಾಗರಾಜ್: ಕುಂಭಮೇಳದಲ್ಲಿ ಕಿನ್ನರ ಅಖಾಡದಲ್ಲಿ ಸನ್ಯಾಸತ್ವ ಸ್ವೀಕರಿಸಿ ಮಹಾಮಂಡಲೇಶ್ವರರಾಗಿದ್ದ ಮಾಜಿ ನಟಿ ಮಮತಾ ಕುಲಕರ್ಣಿ ಅವರ ರಾಜೀನಾಮೆಯನ್ನು ಅಖಾಡ ತಿರಸ್ಕರಿಸಿದೆ. ಹೀಗಾಗಿ ಅವರು ಪಟ್ಟದಲ್ಲಿ ಮುಂದುವರಿಯಲಿದ್ದಾರೆ.
ಈ ಬಗ್ಗೆ ವಿಡಿಯೋ ಮಾಡಿರುವ ಮಮತಾ, ‘ನಾನು ಸಲ್ಲಿಸಿದ್ದ ರಾಜೀನಾಮೆಯನ್ನು ಆಚಾರ್ಯ ಲಕ್ಷ್ಮೀ ನಾರಾಯಣ ತ್ರಿಪಾಠಿ ಅವರು ತಿರಸ್ಕರಿಸಿದ್ದಾರೆ. ಅವರು ನನ್ನನ್ನು ಉಳಿಸಿಕೊಂಡಿದ್ದಾರೆ’ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಜ.24ರಂದು ಮಮತಾ ಅವರು ಸಾಂಸಾರಿಕ ಜೀವನ ಬಿಟ್ಟು ಸನ್ಯಾಸತ್ವ ಸ್ವೀಕರಿಸಿದ್ದರು. ಇವರು ದೇಶದ್ರೋಹ ಎದುರಿಸುತ್ತಿದ್ದು ಸೇರ್ಪಡೆಯು ನಿಯಮ ಬಾಹಿರ ಎಂದು ಅಖಾಡದ ಸ್ವಯಂಘೋಷಿತ ಸ್ಥಾಪಕ ರಿಷಿ ಅಜಯ್ ದಾಸ್ ಅವರು ತಿರಸ್ಕರಿಸಿದ್ದರು. ಅದರ ಬೆನ್ನಲ್ಲೇ ಫೆ.10ರಂದು ಮಮತಾ ರಾಜೀನಾಮೆ ನೀಡಿದ್ದರು.