ತಿರುಮಲದಲ್ಲಿ ಮತ್ತೆ ವಿಮಾನ ಹಾರಾಟ: ಭಕ್ತರ ಆಕ್ರೋಶ, ಹಾರಾಟ ನಿಷೇಧ ವಲಯ ಘೋಷಣೆಗೆ ಆಗ್ರಹ

ತಿರುಮಲ: ಹಿಂದೂಗಳ ಖ್ಯಾತ ಪವಿತ್ರ ಧಾರ್ಮಿಕ ಯಾತ್ರಾತಾಣ ತಿರುಪತಿ ತಿರುಮಲದಲ್ಲಿ ಮತ್ತೆ ಭಕ್ತರು ಆಕ್ರೋಶಗೊಂಡಿದ್ದು. ಈ ಬಾರಿ ಕೇಂದ್ರ ನಾಗರೀಕ ವಿಮಾನಯಾನ ಸಚಿವಾಲಯದ ವಿರುದ್ಧ ಕಿಡಿಕಾರುತ್ತಿದ್ದಾರೆ.
ಹೌದು.. ತಿರುಮಲದ ಶ್ರೀವಾರಿ ದೇವಸ್ಥಾನದ ಮೇಲೆ ಮತ್ತೆ ವಿಮಾನ ಹಾರಾಟ ಕಂಡುಬಂದಿದ್ದು, ಕೂಡಲೇ ತಿರುಮಲವನ್ನು ವಿಮಾನ ಹಾರಾಟ ನಿಷೇಧಿತ ವಲಯ ಎಂದು ಘೋಷಣೆ ಮಾಡಬೇಕು ಎಂದು ಭಕ್ತರು ಆಗ್ರಹಿಸಿದ್ದಾರೆ.
ಈಗಾಗಲೇ ಶ್ರೀವಾರಿ ದೇವಸ್ಥಾನದ ಮೇಲೆ ಯಾವುದೇ ವಿಮಾನ ಸಂಚಾರಕ್ಕೆ ಅವಕಾಶ ನೀಡಬಾರದು ಎಂದು ಆಗಮ ನಿಯಮಗಳು ಹೇಳುತ್ತಿದ್ದರೂ, ಆಗಾಗ್ಗೆ ವಿಮಾನಗಳು ಮತ್ತು ಹೆಲಿಕಾಪ್ಟರ್ಗಳು ಹೆಚ್ಚಾಗಿ ಭಗವಂತನ ದೇವಸ್ಥಾನದ ಮೇಲೆ ಹಾರಾಟ ನಡೆಸುತ್ತಿವೆ.
ಇದಕ್ಕೆ ಹೊಸ ಸೇರ್ಪಡೆ ಎಂಬಂತೆ ಇಂದು ಮತ್ತೊಂದು ಪ್ರಯಾಣಿಕ ವಿಮಾನ ತಿರುಮಲ ದೇಗುಲದ ಮೇಲಿಂದ ಹಾರಾಟ ನಡೆಸಿದೆ. ಇದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದ್ದು. ಇದರ ಬೆನ್ನಲ್ಲೇ ತಿರುಮಲವನ್ನು ಹಾರಾಟ ನಿಷೇಧಿತ ವಲಯವೆಂದು ಘೋಷಿಸಬೇಕೆಂಬ ಟಿಟಿಡಿ ಕೇಂದ್ರ ವಿಮಾನಯಾನ ಇಲಾಖೆಗೆ ಮತ್ತೆ ಮನವಿ ಮಾಡಿದೆ.
ಭಕ್ತರಿಂದಲೇ ವಿಡಿಯೋ ರೆಕಾರ್ಡ್
ಇನ್ನು ತಿರುಮಲ ಶ್ರೀವಾರಿ ದೇವಸ್ಥಾನದ ಮೇಲೆ ಮತ್ತೆ ವಿಮಾನ ಹಾರಾಟ ನಡೆಸಿದ್ದು, ಭಾನುವಾರ ಬೆಳಿಗ್ಗೆ, ಅತ್ಯಂತ ಕಡಿಮೆ ಎತ್ತರದಲ್ಲಿ ಭಗವಂತನ ದೇವಸ್ಥಾನದ ಮೇಲೆ ವಿಮಾನ ಹಾರಾಟ ನಡೆಸಿತು. ಕೆಲವು ಭಕ್ತರು ಅದನ್ನು ಗಮನಿಸಿ ತಮ್ಮ ಮೊಬೈಲ್ ಫೋನ್ಗಳಲ್ಲಿ ರೆಕಾರ್ಡ್ ಮಾಡಿಕೊಂಡರು. ಅಲ್ಲದೆ ಈ ಸಂಬಂಧ ಕೆಲವು ಭಕ್ತರು ಈ ಬಗ್ಗೆ ಟಿಟಿಡಿ ಜಾಗೃತ ಸಿಬ್ಬಂದಿಗೆ ದೂರು ನೀಡಿದ್ದಾರೆ. ದೇವಸ್ಥಾನದ ಮೇಲೆ ಹಾರಾಟ ನಡೆಸಿದ ವಿಮಾನ ಎಲ್ಲಿಂದ ಬಂತು ಮತ್ತು ಎಲ್ಲಿಗೆ ಹೋಯಿತು ಎಂದು ಟಿಟಿಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಶಾಸ್ತ್ರಗಳು ಏನು ಹೇಳುತ್ತವೆ?
ಆಗಮ ಶಾಸ್ತ್ರಗಳ ಪ್ರಕಾರ, ತಿರುಮಲ ಶ್ರೀವಾರಿ ದೇವಸ್ಥಾನದ ಮೇಲೆ ವಿಮಾನಗಳು ಮತ್ತು ಹೆಲಿಕಾಪ್ಟರ್ಗಳು ಹಾರಾಟ ನಡೆಸುವುದನ್ನು ನಿಷೇಧಿಸಲಾಗಿದೆ. ಅದಕ್ಕಾಗಿಯೇ ತಿರುಮಲವನ್ನು ಹಾರಾಟ ನಿಷೇಧಿತ ವಲಯವೆಂದು ಘೋಷಿಸುವಂತೆ ಟಿಟಿಡಿ ಕೇಂದ್ರ ಸರ್ಕಾರವನ್ನು ಹಲವಾರು ಸಂದರ್ಭಗಳಲ್ಲಿ ವಿನಂತಿಸಿದೆ. ಆದಾಗ್ಯೂ, ಈ ನಿಯಮವನ್ನು ಜಾರಿಗೆ ತರಲು ಸಾಧ್ಯವಿಲ್ಲ ಎಂದು ನಾಗರಿಕ ವಿಮಾನಯಾನ ಇಲಾಖೆ ಹೇಳಿದೆ.
ಶ್ರೀವಾರಿ ದೇವಸ್ಥಾನದ ಮೇಲೆ ಯಾವುದೇ ವಾಹನ ಸಂಚಾರಕ್ಕೆ ಅವಕಾಶ ನೀಡಬಾರದು ಎಂದು ಆಗಮ ನಿಯಮಗಳು ಹೇಳಿದ್ದರೂ, ವಿಮಾನಗಳು ಮತ್ತು ಹೆಲಿಕಾಪ್ಟರ್ಗಳು ಆಗಾಗ್ಗೆ ದೇವಾಲಯದ ಮೇಲೆ ಹಾರಾಡುತ್ತವೆ. ತಿರುಮಲವನ್ನು ಹಾರಾಟ ನಿಷೇಧಿತ ವಲಯವೆಂದು ಘೋಷಿಸಬೇಕೆಂಬ ಟಿಟಿಡಿಯ ಮನವಿಯನ್ನು ನಾಗರಿಕ ವಿಮಾನಯಾನ ಇಲಾಖೆ ಗಮನಿಸುತ್ತಿಲ್ಲ.
ಶ್ರೀವಾರಿ ಭಕ್ತರು ಈ ಬಗ್ಗೆ ಚಿಂತಿತರಾಗಿದ್ದಾರೆ. ಕಳೆದ ಎರಡು ಮೂರು ವರ್ಷಗಳಲ್ಲಿ ಶ್ರೀವಾರಿ ದೇವಸ್ಥಾನದ ಮೇಲೆ ವಿಮಾನಗಳು ಮತ್ತು ಹೆಲಿಕಾಪ್ಟರ್ಗಳು ಹಾರಾಡಿರುವ ನಿದರ್ಶನಗಳಿವೆ. ಹಿಂದೆ ಇಂತಹ ಘಟನೆಗಳು ಸಂಭವಿಸಿದಾಗ ಭಕ್ತರ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ಟಿಟಿಡಿ ಪ್ರತಿಕ್ರಿಯಿಸಿದೆ. ಕೆಲವು ಸಮಯದಿಂದ ದೇವಾಲಯದ ಮೇಲೆ ಆಗಾಗ್ಗೆ ಹಾರಾಟ ಮತ್ತು ಹೆಲಿಕಾಪ್ಟರ್ಗಳು ಹಾರುತ್ತಿರುವುದು ಕಳವಳಕ್ಕೆ ಕಾರಣವಾಗಿದೆ.