Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಅಹಮದಾಬಾದ್ ವಿಮಾನ ದುರಂತದಲ್ಲಿ ಟೀ ಅಂಗಡಿಯ 14 ವರ್ಷದ ಬಾಲಕ ಆಕಾಶ್‌ ದಾರುಣ ಸಾವು

Spread the love

ಅಹಮದಾಬಾದ್: ಇಲ್ಲಿನ ವಿಮಾನ ನಿಲ್ದಾಣದ ಬಳಿಯಲ್ಲಿ ನಿನ್ನೆ ಏರ್ ಇಂಡಿಯಾ ವಿಮಾನ ಪತನಗೊಂಡು ದುರಂತ ನಡೆದಿತ್ತು. ಈ ದುರಂತದಲ್ಲಿ ಟೀ ಅಂಗಡಿಯ ಬಳಿ ನಿಂತಿದ್ದಂತ 14 ವರ್ಷದ ಬಾಲಕ ಸುಟ್ಟು ಕರಕಲಾಗಿರುವುದಾಗಿ ತಿಳಿದು ಬಂದಿದೆ.

ಅಹಮದಾಬಾದ್ ನ ಬಿಜೆ ಹಾಸ್ಟೆಲ್ ನ ಮುಂಭಾಗದಲ್ಲಿ ಆಕಾಶ್ ಕುಟುಂಬ ಟೀ ಅಂಗಡಿ ಇಟ್ಟುಕೊಂಡಿತ್ತು.

ನಿನ್ನೆ ವಿಮಾನ ದುರಂತಕ್ಕೂ ಮುನ್ನಾ ತಾಯಿಗೆ ತಿಂಡಿ ಕೊಡೋದಕ್ಕೆ ಅಂಗಡಿ ಬಳಿ ತೆರಳಿದ್ದನು. ಈ ವೇಳೆಯಲ್ಲೇ ಏರ್ ಇಂಡಿಯಾ ವಿಮಾನ ಪತನಗೊಂಡು ಬೆಂಕಿ ಹೊತ್ತಿಕೊಂಡಿದೆ. ಈ ಬೆಂಕಿಯಲ್ಲಿ 14 ವರ್ಷದ ಬಾಲಕ ಆಕಾಶ್ ದಾರುಣ ಅಂತ್ಯ ಕಂಡಿದ್ದಾನೆ.

ಆಕಾಶ್ ನನ್ನು ಕಳೆದುಕೊಂಡ ಸಹೋದರ ಕಲ್ಪೇಶ್ ಆಕ್ರಂದನ ಮುಗಿಲು ಮುಟ್ಟಿದೆ. ನನ್ನ ದೊಡ್ಡಣ್ಣ ನನಗೆ ಕರೆ ಮಾಡಿ ವಿಚಾರ ತಿಳಸಿದ್ದರು. ನಾನು ಆಟೋ ಓಡಿಸುತ್ತಿದ್ದೆ. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ತೆರಳಿ ನೋಡಿದೆ. ಬೆಂಕಿ ತೀವ್ರತೆಗೆ ಗಾಯಗೊಂಡಿದ್ದ ನನ್ನ ತಾಯಿ ಆಸ್ಪತ್ರೆಗೆ ಕರೆದೊಯ್ದರು. ನನ್ನ ತಮ್ಮ ಅಲ್ಲೇ ಸಿಲುಕಿದ್ದ. ನನ್ನ ತಮ್ಮನನ್ನು ಒಮ್ಮೆ ನೋಡಲು ಬಿಡಿ ಎಂದು ಕಣ್ಣೀರು ಹಾಕಿದರೂ ಬಿಡಲಿಲ್ಲ. ನನ್ನ ತಮ್ಮ ವಿಮಾನ ದುರಂತದಲ್ಲಿ ಸುಟ್ಟು ಹೋಗಿದ್ದಾಗಿ ತಿಳಿಸಿದ್ದಾರೆ


Spread the love
Share:

administrator

Leave a Reply

Your email address will not be published. Required fields are marked *