ವೃದ್ಧಾಪ್ಯ ಭಾರತದ ತೀವ್ರ ಸಮಸ್ಯೆಯಾಗಲಿದೆ: ಪೈ ವಿಶ್ಲೇಷಣೆ

ನವದೆಹಲಿ: ಭಾರತದ ವೇಗವಾಗಿ ಬೆಳೆಯುತ್ತಿರುವ ವೃದ್ಧ ಜನಸಂಖ್ಯೆಯು ಶೀಘ್ರದಲ್ಲೇ ದೇಶದ ಅತಿದೊಡ್ಡ ಸಂಕಷ್ಟವಾಗಲಿದೆ ಎಂದು ಆರಿನ್ ಕ್ಯಾಪಿಟಲ್ನ ಅಧ್ಯಕ್ಷ ಮೋಹನದಾಸ್ ಪೈ ಎಚ್ಚರಿಕೆ ನೀಡಿದ್ದಾರೆ. ಸ್ಟ್ಯಾನ್ಫೋರ್ಡ್ ಇಂಡಿಯಾ ಕಾನ್ಫರೆನ್ಸ್ 2025ರಲ್ಲಿ ಮಾತನಾಡಿದ ಮಾಜಿ ಇನ್ಫೋಸಿಸ್ ಸಿಎಫ್ಒ ಪೈ, ದತ್ತಾಂಶ ಮತ್ತು ದೀರ್ಘಾವಧಿಯ ಅಂದಾಜುಗಳನ್ನು ಉಲ್ಲೇಖಿಸಿ, ಭಾರತದ 60 ವರ್ಷಕ್ಕಿಂತ ಮೇಲ್ಪಟ್ಟ ಜನಸಂಖ್ಯೆಯು ಪ್ರಸ್ತುತ 130 ಮಿಲಿಯನ್ ಇದ್ದು, ಇದು ಶೀಘ್ರದಲ್ಲೇ 200 ಮಿಲಿಯನ್ಗೆ ಏರಲಿದೆ ಎಂದು ತಿಳಿಸಿದರು.
“ಭಾರತದ ಅತಿದೊಡ್ಡ ಸಮಸ್ಯೆಯಾಗಲಿರುವುದು ವೃದ್ಧಾಪ್ಯ” ಎಂದು ಪೈ ಹೇಳಿದರು. ದೇಶದಲ್ಲಿ, ವಿಶೇಷವಾಗಿ ದಕ್ಷಿಣ ರಾಜ್ಯಗಳಲ್ಲಿ ಜನನ ದರ ಕಡಿಮೆಯಾಗುತ್ತಿರುವುದು ಇದಕ್ಕೆ ಕಾರಣ ಎಂದರು. “ಭಾರತದ ಜನನ ದರ ಕಡಿಮೆಯಾಗಿದೆ. ಭಾರತೀಯ ಮಹಿಳೆಯರು ಮುಂದುವರಿಯುತ್ತಿದ್ದಾರೆ ಮತ್ತು ಅವರು ಉತ್ತಮವಾಗಿ ಸಾಧಿಸುತ್ತಿದ್ದಾರೆ” ಎಂದು ಅವರು ಶ್ಲಾಘಿಸಿದರು.
ಭಾರತದ ಜನನ ದರ ಈಗ 2.0ಕ್ಕೆ ಇಳಿದಿದ್ದು, ಇದು ಪುನರ್ಉತ್ಪಾದನೆ ದರಕ್ಕಿಂತ ಕಡಿಮೆಯಾಗಿದೆ. ದಕ್ಷಿಣ ರಾಜ್ಯಗಳಲ್ಲಿ ಇದು 1.6 ರಿಂದ 1.7ರ ನಡುವೆ ಇದೆ ಎಂದು ಪೈ ತಿಳಿಸಿದರು.ದಕ್ಷಿಣ ಭಾರತದಾದ್ಯಂತ ಜನನ ದರ 1.6 ರಿಂದ 1.7ರವರೆಗಿದೆ. ಇದರ ಜೊತೆಗೆ, 1,000 ಪುರುಷರಿಗೆ 1,020 ಮಹಿಳೆಯರಿದ್ದಾರೆ. ಭಾರತದಲ್ಲಿ ಪುರುಷರಿಗಿಂತ ಮಹಿಳೆಯರ ಸಂಖ್ಯೆ ಹೆಚ್ಚಿದೆ,” ಎಂದು ಅವರು ಗಮನ ಸೆಳೆದರು.
ಶಿಕ್ಷಣ ಕ್ಷೇತ್ರದಲ್ಲಿ ಮಹಿಳೆಯರ ಪ್ರಗತಿಯನ್ನು ಒತ್ತಿ ಹೇಳಿದ ಪೈ, “ಗಂಡು ಮಕ್ಕಳಿಗಿಂತ ಹೆಚ್ಚಿನ ಹೆಣ್ಣು ಮಕ್ಕಳು ಶಾಲೆಯಲ್ಲಿದ್ದಾರೆ. ಅನೇಕ ಗಂಡು ಮಕ್ಕಳು ಗಲಾಟೆಗಾರರಾಗಿ ಶಾಲೆಯಿಂದ ಹೊರಬರುತ್ತಾರೆ,” ಎಂದರು. ಕಂಪನಿಗಳ ನಿರ್ದೇಶಕ ಮಂಡಳಿಯಲ್ಲಿ 18 ರಿಂದ 20 ಪ್ರತಿಶತ ಸ್ಥಾನಗಳನ್ನು ಮಹಿಳೆಯರು ಹೊಂದಿದ್ದಾರೆ. ಸ್ಟಾರ್ಟ್ಅಪ್ ಉದ್ಯಮದಲ್ಲಿ ಸುಮಾರು 15-20 ಪ್ರತಿಶತ ಮಹಿಳೆಯರಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
100 ವಿದ್ಯಾರ್ಥಿಗಳು 1ನೇ ತರಗತಿಗೆ ಸೇರಿದರೆ, ಅವರಲ್ಲಿ 80 ಜನರು 10ನೇ ತರಗತಿಯವರಗೆಗೂ ಹೋಗುತ್ತಾರೆ. “80ರಲ್ಲಿ 80 ಪ್ರತಿಶತ ಅಂದರೆ 64ಮಕ್ಕಳು ಉತ್ತೀರ್ಣರಾಗುತ್ತಾರೆ. ಅವರಲ್ಲಿ 56 ಜನರು 11 ಮತ್ತು 12ನೇ ತರಗತಿಗೆ ಸೇರುತ್ತಾರೆ, ಮತ್ತು 28 ಜನರು ಕಾಲೇಜಿಗೆ ಹೋಗುತ್ತಾರೆ. ಆದ್ದರಿಂದ, 18 ರಿಂದ 23 ವರ್ಷ ವಯಸ್ಸಿನವರಲ್ಲಿ ಕೇವಲ 28 ಪ್ರತಿಶತ ಮಾತ್ರ ಕಾಲೇಜಿಗೆ ಸೇರುತ್ತಾರೆ,” ಎಂದರು.
“ನಾವು ಪುರುಷರಿಗಿಂತ ಹೆಚ್ಚಿನ ಮಹಿಳೆಯರನ್ನು ಪದವೀಧರರನ್ನಾಗಿ ಪಡೆಯುತ್ತಿದ್ದೇವೆ. ಉತ್ತರ ಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶದಲ್ಲಿ ಹೆಚ್ಚಿನ ಮಹಿಳೆಯರು ಪದವಿ ಪಡೆಯುತ್ತಿದ್ದಾರೆ. ದಕ್ಷಿಣದಲ್ಲಿ ನಾವು ಸಂಖ್ಯೆಯ ಕೊರತೆಯನ್ನು ಎದುರಿಸುತ್ತಿದ್ದೇವೆ,” ಎಂದು ಅವರು ತಿಳಿಸಿದರು. ಭಾರತದ ಜನಸಂಖ್ಯೆ ಬೆಳವಣಿಗೆ ದರವು 0.8 ಪ್ರತಿಶತಕ್ಕೆ ಇಳಿದಿರುವುದನ್ನು ಉಲ್ಲೇಖಿಸಿದ ಪೈ, “ದೆಹಲಿಯ ಜೆಎನ್ಯುನಲ್ಲಿ ಕುಳಿತಿರುವ ಬಹಳಷ್ಟು ಜನರು ದತ್ತಾಂಶವನ್ನೂ ನೋಡದೆ ಉದ್ಯೋಗ ಕೊರತೆಯ ಬಗ್ಗೆ ಗೊಣಗುತ್ತಾರೆ” ಎಂದು ಟೀಕಿಸಿದರು.
“ದಕ್ಷಿಣ ಭಾರತದಲ್ಲಿ ಉದ್ಯೋಗಕ್ಕೆ ಜನರ ಕೊರತೆ ಎದುರಾಗಿದೆ. ಉತ್ತರ ಪ್ರದೇಶ ಈಗ ಬೆಳೆಯುತ್ತಿದೆ ಮತ್ತು ಇದು ಒಳ್ಳೆಯದು, ನಾವು ಅದನ್ನು ಬಯಸುತ್ತೇವೆ. ಬಿಹಾರ ಇನ್ನೂ ಬೆಳೆಯಬೇಕಿದೆ. ಜಾರ್ಖಂಡ್, ಪಶ್ಚಿಮ ಬಂಗಾಳ, ಕೇರಳದಿಂದ ಜನರು ಬೆಂಗಳೂರು ಮತ್ತು ದಕ್ಷಿಣಕ್ಕೆ ಕೆಲಸಕ್ಕಾಗಿ ಬರುತ್ತಾರೆ. ನಮಗೆ ಜನರ ಕೊರತೆ ಇದೆ” ಎಂದರು.
ಪದ್ಮಶ್ರೀ ಪುರಸ್ಕೃತ ಮೋಹನದಾಸ್ ಪೈ, ಹಣಕಾಸು, ತಂತ್ರಜ್ಞಾನ, ಶಿಕ್ಷಣ, ಮತ್ತು ಸ್ಟಾರ್ಟ್ಅಪ್ ಕ್ಷೇತ್ರಗಳಲ್ಲಿ ನಾಲ್ಕು ದಶಕಗಳಿಗಿಂತ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಆರಿನ್ ಕ್ಯಾಪಿಟಲ್ನ ಅಧ್ಯಕ್ಷರಾಗಿರುವ ಅವರು, SEBI, IFSCA, ಮತ್ತು ಪ್ರಮುಖ ಸಂಸ್ಥೆಗಳ ನಿರ್ದೇಶಕ ಮಂಡಳಿಗಳಲ್ಲಿ ಪ್ರಮುಖ ಸ್ಥಾನಗಳನ್ನು ಅಲಂಕರಿಸಿದ್ದಾರೆ.