Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

‘ಸಲಾರ್’ ಸಿನಿಮಾ ನಂತರ ರವಿ ಬಸ್ರೂರುಗೆ ಅಮೆರಿಕದಿಂದ ಕರೆ: ಬಯಲಾಯ್ತು ಕುತೂಹಲಕಾರಿ ಸಂಗತಿ

Spread the love

‘ಕೆಜಿಎಫ್’ ಸಿನಿಮಾ ಮೂಲಕ ಬೇರೆಯದೇ ಹಂತಕ್ಕೆ ಹೋದವರು ರವಿ ಬಸ್ರೂರುಅವರು. ಅವರು ಹಲವು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಮಾಸ್ ಸಿನಿಮಾಗಳು ಎಂದಾದಾಗ ಅವರಿಗೆ ಆಫರ್​​ ಹೋಗೋದು ಹೆಚ್ಚು. ಅವರು ನಿರ್ದೇಶನ ಮಾಡಿದ ‘ವೀರಚಂದ್ರಹಾಸ’ ಸಿನಿಮಾ ಸೆಪ್ಟೆಂಬರ್ 19ರಂದು ತೆಲುಗಿನಲ್ಲಿ ರಿಲೀಸ್ ಆಗುತ್ತಿದೆ. ಈ ವೇಳೆ ಅವರು ತೆಲುಗು ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ಆಗ ಹಲವು ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ.

‘ಉಗ್ರಂ’, ‘ಕೆಜಿಎಫ್’, ಸಲಾರ್ ರೀತಿಯ ಸಿನಿಮಾಗಳಿಗೆ ರವಿ ಬಸ್ರೂರು ಅವರು ಸಂಗೀತ ಸಂಯೋಜನೆ ಮಾಡಿದರು. ಈ ಸಿನಿಮಾಗಳ ಹಿನ್ನೆಲೆ ಸಂಗೀತ ಸಾಕಷ್ಟು ಗಮನ ಸೆಳೆಯಿತು. ಈ ಕಾರಣ ಅವರು ಸಾಕಷ್ಟು ಜನಪ್ರಿಯತೆ ಪಡೆದರು. ‘ಸಲಾರ್’ ಚಿತ್ರದಿಂದ ಅವರಿಗೆ ಸಾಕಷ್ಟು ಆಫರ್​ಗಳು ಬಂದವಂತೆ.

‘ಸಲಾರ್’ ಸಿನಿಮಾದ ಹಿನ್ನೆಲೆ ಸಂಗೀತ ಕೆಲವರಿಗೆ ಇಷ್ಟ ಆಗಿಲ್ಲ. ‘ಕೆಜಿಎಫ್’ ಚಿತ್ರದ ಪವರ್ ಫುಲ್ ಆಗಿಲ್ಲ ಎಂದು ಅನೇಕರು ಹೇಳಿದ್ದು ಇದೆ. ಆದರೆ, ರವಿ ಬಸ್ರೂರು ಜೀವನದಲ್ಲಿ ಈ ಚಿತ್ರ ಬದಲಾವಣೆ ತಂದಿತ್ತು. ‘ಸಲಾರ್ ಸಿನಿಮಾ ರಿಲೀಸ್ ಆದ ಬಳಿಕ ನನಗೆ ಅಮೆರಿಕ ಪ್ರೊಡಕ್ಷನ್ ಹೌಸ್​ಗಳಿಂದ 3-4 ಫೋನ್​ಗಳು ಬಂದವು ಎಂದು ಅವರು ಹೇಳಿದ್ದಾರೆ.

ರವಿ ಬಸ್ರೂರು ಅವರು ಸದ್ಯ ಸಾಕಷ್ಟು ಆಫರ್ ಪಡೆಯುತ್ತಿದ್ದಾರೆ. ಆದರೆ, ಮೊದಲಿನಷ್ಟು ಸಿನಿಮಾ ಹಿಟ್ ಆಗುತ್ತಿಲ್ಲ. ಈಗ ಅವರು ಪ್ರಶಾಂತ್ ನೀಲ್ ಹಾಗೂ ಜೂನಿಯರ್ ಎನ್​ಟಿಆರ್ ಸಿನಿಮಾ ಜೊತೆ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಅವರು 3-4 ವರ್ಷನ್​ಗಳ ಮ್ಯೂಸಿಕ್​ನ ಕಂಪೋಸ್ ಮಾಡಿಯಾಗಿದೆ. ಅವರು ಈ ಬಾರಿ ನಿರೀಕ್ಷೆಯನ್ನು ಮೀರುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ರವಿ ಬಸ್ರೂರು ಅವರು ಸಿನಿಮಾ ನಿರ್ಮಾಣ, ನಿರ್ದೇಶನದಲ್ಲೂ ತೊಡಗಿಕೊಂಡಿದ್ದಾರೆ. ಪ್ರಯೋಗಾತ್ಮಕ ಸಿನಿಮಾಗಳನ್ನು ಅವರು ನಿರ್ದೇಶನ ಮಾಡುತ್ತಾರೆ. ಈ ಮೊದಲು ಸಣ್ಣ ಮಕ್ಕಳ ಸಿನಿಮಾ ನಿರ್ದೇಶನ ಮಾಡಿದ್ದರು. ಈ ಪಾತ್ರಧಾರಿಗಳಿಗೆ ಯಶ್, ರಾಧಿಕಾ ಪಂಡಿತ್ ಮೊದಲಾದವರಿಂದ ವಾಯ್ಸ್ ಕೊಡಿಸಿದ್ದರು. ಆದರೆ, ಈ ಪ್ರಯತ್ನ ಯಶಸ್ಸು ಕಂಡಿರಲಿಲ್ಲ. ಈಗ ವೀರಚಂದ್ರಹಾಸ ಯಕ್ಷಗಾನ ಆಧರಿಸಿದೆ.


Spread the love
Share:

administrator

Leave a Reply

Your email address will not be published. Required fields are marked *