ಪಾದಚಾರಿ ಮಾರ್ಗಕ್ಕೆ ತಡೆಯಾದ ಪ್ರಚಾರ ಫಲಕ: ನಾಗರಿಕರಿಂದ ತಕ್ಷಣದ ಕ್ರಮಕ್ಕೆ ಆಗ್ರಹ

ಕವಿ ಮುದಣ್ಣ ಮಾರ್ಗ, ನಗರಸಭೆ ಕಛೇರಿ ಎದುರುಗಡೆ, ಪಾದಚಾರಿ ರಸ್ತೆಗೆ ಅಡ್ಡವಾಗಿ ಧಾರ್ಮಿಕ ಹಾಗೂ ಇಲಾಖೆಯ ಕಾರ್ಯಕ್ರಮದ ಪ್ರಚಾರ ಫಲಕವನ್ನು ಅಳವಡಿಸಲಾಗಿದೆ. ಪಾದಚಾರಿಗಳು ನಡೆದು ಸಾಗಲು ತಡೆಯೊಡ್ಡಿದಂತಾಗಿದೆ. ಸಾರ್ವಜನಿಕರು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಪಾದಚಾರಿ ರಸ್ತೆಯನ್ನು ಬಿಟ್ಟು, ಸದಾ ವಾಹನ ದಟ್ಟಣೆ ಇರುವ ರಸ್ತೆಯಲ್ಲಿ ಸಂಚರಿಸಬೇಕಾದ ಸಮಸ್ಯೆ ಎದುರಾಗಿದೆ.
ಸನಿಹದ ಬಸ್ಸು ನಿಲ್ದಾಣದಲ್ಲಿ ಬಸ್ಸು ಕಾಯುವರಿಗೆ ಫಲಕ ಅಡ್ಡವಾಗಿರುವುದರಿಂದ, ಬಸ್ಸು ಬರುವಿಕೆಯು ಕಾಣದಂತಾಗಿದೆ. ತಕ್ಷಣ ನಗರಸಭೆ ಅಧಿಕಾರಿಗಳು, ಪ್ರಚಾರ ಫಲಕವನ್ನು ಆಯಾಕಟ್ಟಿನ ಸ್ಥಳದಲ್ಲಿ ಸುರಕ್ಷಿತ ವಿಧಾನದಲ್ಲಿ ಅಳವಡಿಸಲು ಸಂಬಂಧಪಟ್ಟವರಿಗೆ ಸೂಚಿಸಬೇಕೆಂದು, ನಗರಸಭೆಯ ಮಾಜಿ ಸದಸ್ಯ ನಿತ್ಯಾನಂದ ಒಳಕಾಡುವರು ಆಗ್ರಹಪಡಿಸಿದ್ದಾರೆ.