Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಜಗನ್ನಾಥ ರಥಯಾತ್ರೆಯಲ್ಲಿ ಅವಘಡ: ನಿಯಂತ್ರಣ ತಪ್ಪಿ ಓಡಿದ ಆನೆಗಳು, ಭಕ್ತರಲ್ಲಿ ನೂಕುನುಗ್ಗಲು – ಹಲವರಿಗೆ ಗಾಯ!

Spread the love

SHOCKING : ಐಸಿಹಾಸಿಕ ಜಗನ್ನಾಥ ಯಾತ್ರೆಯಲ್ಲಿ ಭಕ್ತರನ್ನ ಅಟ್ಟಾಡಿಸಿದ ಆನೆ ; ದಿಕ್ಕಾಪಾಲಾಗಿ ಓಡಿದ ಜನ |WATCH VIDEO

ಶುಕ್ರವಾರ ಬೆಳಿಗ್ಗೆ ಅಹಮದಾಬಾದ್ನಲ್ಲಿ ನಡೆಯುತ್ತಿದ್ದ 148ನೇ ಭಗವಾನ್ ಜಗನ್ನಾಥಜಿಯವರ ಮಹಾ ರಥಯಾತ್ರೆಯಲ್ಲಿ ಅಹಿತಕರ ಘಟನೆ ನಡೆದಿದೆ.

ಮೆರವಣಿಗೆಯ ಭಾಗವಾಗಿದ್ದ ಮೂರು ಆನೆಗಳು ಇದ್ದಕ್ಕಿದ್ದಂತೆ ದಿಕ್ಕಾಪಾಲಾಗಿ ಓಡಿಹೋದವು. ಈ ವೇಳೆ ಆನೆಯೊಂದು ಭಕ್ತರನ್ನಅಟ್ಟಾಡಿಸಿದೆ.

ರಥಯಾತ್ರೆಯ ಮಾರ್ಗದಲ್ಲಿ ಆನೆಗಳು ದಿಕ್ಕು ತಪ್ಪಿದಾಗ ಜನರು ಕೂಡ ಭಯದಿಂದ ದಿಕ್ಕಾಪಾಲಾಗಿ ಓಡಿದರು. ಘಟನೆಯಲ್ಲಿ ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿದೆ ಎನ್ನಲಾಗಿದೆ.

ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಪವಿತ್ರ ಪಹಿಂದ್ ಸಮಾರಂಭವನ್ನು ನೆರವೇರಿಸಿದ ನಂತರ ಯಾತ್ರೆಗೆ ಚಾಲನೆ ನೀಡಿದ್ದರು, ಮೊದಲ ಬಾರಿಗೆ ಭಗವಂತನಿಗೆ ಗೌರವ ಸಲ್ಲಿಸಲಾಯಿತು. ಕೇಂದ್ರ ಗೃಹ ಸಚಿವ ಅಮಿತ್ ಶಾ, ತಮ್ಮ ಕುಟುಂಬದೊಂದಿಗೆ ಜಮಾಲ್ಪುರ್ ಜಗನ್ನಾಥ ದೇವಸ್ಥಾನದಲ್ಲಿ ಮಂಗಳಾ ಆರತಿಯಲ್ಲಿ ಭಾಗವಹಿಸಿ, ಆ ದಿನಕ್ಕೆ ಭಕ್ತಿಯ ಮೆರುಗು ನೀಡಿದರು.


Spread the love
Share:

administrator

Leave a Reply

Your email address will not be published. Required fields are marked *