Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ದರೋಡೆಕೊರರ ಪತ್ತೆಹಚ್ಚಿತು ಮದುವೆ ಆಮಂತ್ರಣ

Spread the love

ಮಹಾರಾಷ್ಟ್ರ: ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ನಡೆದ ದರೋಡೆ ಪ್ರಕರಣವನ್ನು ಭೇದಿಸಲು ಮದುವೆ ಆಮಂತ್ರಣ ಪತ್ರವು ಪೊಲೀಸರಿಗೆ ಸಹಾಯ ಮಾಡಿದೆ. ಸಂತ್ರಸ್ತನ ಸಹೋದರನೇ ಈ ಕೃತ್ಯದಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಾರ್ಚ್ 28 ರಂದು ಜವಾಹರ್‌ನ ವಾವರ್ ಗ್ರಾಮದ ಬಳಿ ಈ ಘಟನೆ ನಡೆದಿದೆ.

ಮೊಖಡ ತಾಲೂಕಿನ ಖೋಡಾಲ ನಿವಾಸಿ ಬೋರು ಖಂಡು ಬಿನ್ನಾರ್ (30) ಎಂಬುವವರು ಪಿಕಪ್ ವ್ಯಾನ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಮೂವರು ಅಪರಿಚಿತರು ತಮ್ಮ ಮೋಟಾರ್‌ಸೈಕಲ್ ಕೆಟ್ಟುಹೋಗಿದೆ ಎಂದು ನೆಪ ಹೇಳಿ ವ್ಯಾನ್ ನಿಲ್ಲಿಸಿದ್ದಾರೆ. ಸಹಾಯದ ಮನವಿ ನಂಬಿದ ವ್ಯಕ್ತಿ ತಮ್ಮ ವ್ಯಾನ್ ಚಾಲಕನಿಗೆ ವಾಹನ ನಿಲ್ಲಿಸಲು ಹೇಳಿದ್ದಾರೆ. ಕೂಡಲೇ ದರೋಡೆಕೋರರು ವ್ಯಕ್ತಿ ಮತ್ತು ವ್ಯಾನ್ ಚಾಲಕನ ಕಣ್ಣಿಗೆ ಮೆಣಸಿನ ಪುಡಿ ಎಸೆದು ಚಾಲಕನ ಆಸನದ ಹಿಂದೆ ಇರಿಸಿದ್ದ 6,85,500 ರೂಪಾಯಿ ನಗದು ದೋಚಿದ್ದಾರೆ.

ಪರಾರಿಯಾಗುವ ಮೊದಲು ವ್ಯಕ್ತಿಗೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ಜವಾಹರ್ ಪೊಲೀಸರು ಅಪರಿಚಿತ ಅಪರಾಧಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 309(4) (ದರೋಡೆ) ಮತ್ತು 3(5) (ಸಾಮಾನ್ಯ ಉದ್ದೇಶ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅಪರಾಧ ಸ್ಥಳದಲ್ಲಿ ತನಿಖೆ ನಡೆಸುವಾಗ ಪೊಲೀಸರು ಮೆಣಸಿನ ಪುಡಿಯ ಕುರುಹುಗಳು ಮತ್ತು ಅಸಾಮಾನ್ಯ ಸಾಕ್ಷ್ಯವನ್ನು ಕಂಡುಕೊಂಡಿದ್ದಾರೆ. ಮೆಣಸಿನ ಪುಡಿಯನ್ನು ಸುತ್ತಿದ ಮದುವೆ ಆಮಂತ್ರಣ ಪತ್ರ ಪತ್ತೆಯಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಆಮಂತ್ರಣ ಪತ್ರಿಕೆಯಲ್ಲಿ ಹೆಸರಿಸಲಾದ ವ್ಯಕ್ತಿಯನ್ನು ಪೊಲೀಸರು ಪತ್ತೆಹಚ್ಚಿ, ಆತ ದರೋಡೆಯಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ. ನಂತರ ಇತರ ಮೂವರು ಅಪರಾಧಿಗಳನ್ನು ಬಂಧಿಸಲಾಯಿತು.

ಕಳೆದ ಎರಡು ದಿನಗಳಲ್ಲಿ ನಾಲ್ವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ. ಬಂಧಿತ ನಾಲ್ವರಲ್ಲಿ ಸಂತ್ರಸ್ತನ ಸಹೋದರ ದತ್ತು ಖಂಡು ಬಿನ್ನಾರ್ (34) ದರೋಡೆಗೆ ಸಂಚು ರೂಪಿಸಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ. ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಹೆಸರಿಸಲಾದ ಮೊಖಡ ನಿವಾಸಿ ಕಿರಣ್ ಅನಂತ ಲಾಮ್ಟೆ (23), ಪರಮೇಶ್ವರ್ ಕಮಲಾಕರ್ ಜೋಲೆ (24) ಮತ್ತು ನಾಸಿಕ್‌ನ ದಾದಾ ಬಾಜಿರಾವ್ ಪೆಹ್ರೆ (24) ಎಂದು ಗುರುತಿಸಲಾಗಿದೆ. ಬಂಧಿತರಿಂದ ಕದ್ದ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *