ಕೊಡಗು: ಮದ್ಯಪಾನದಿಂದ ಗಲಾಟೆ ಮಾಡಿದ ಮೂವರಿಗೆ ನ್ಯಾಯಾಲಯದಿಂದ ವಿಶಿಷ್ಟ ಶಿಕ್ಷೆ!

ಕೊಡಗು: ಕಂಠಪೂರ್ತಿ ಮದ್ಯ ಸೇವಿಸಿ ಸಾರ್ವಜನಿಕ ಸ್ಥಳಗಳಲ್ಲಿ ಕಿರಿಕ್ ಮಾಡೋರೆ ಬಿ ಅಲರ್ಟ್! ಕೊಂಚ ಮಿಸ್ ಆದ್ರೂ ನಿಮ್ಮ ಮಾನ ಮರ್ಯಾದೆ ಊರುತುಂಬಾ ಹರಾಜಾಗೋದು ಜೋಕೆ..!
ಹೌದು, ಎಣ್ಣೆ ಏಟಿನಲ್ಲಿ ಗಲಾಟೆ ಎಬ್ಬಿಸಿದ ಪುಂಡರು ಹೊಸ ರೀತಿಯ ಶಿಕ್ಷೆ ಅನುಭವಿಸಿದ ಘಟನೆಯೊಂದು ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನಲ್ಲಿ ನಡೆದಿದ್ದು ಪಟ್ಟಣದಲ್ಲಿ ಕುಡಿದು ಗಲಾಟೆ ಮಾಡಿ ಶಾಂತಿ ಸುವ್ಯವಸ್ಥೆಗೆ ಭಂಗ ಉಂಟು ಮಾಡಿದದ್ರಿಗೆ ನ್ಯಾಯಾಲಯ ಖಡಕ್ ಶಿಕ್ಷೆ ನೀಡಿದೆ
ಭಾರತೀಯ ನ್ಯಾಯ ಸಂಹಿತೆ ಕಲಂ 355 ರ ಅಡಿಯಲ್ಲಿ ಅಪರಾಧವೆಸಗಿದ್ದ 3 ಜನ ಆರೋಪಿಗಳಿಗೆ ಸೋಮವಾರಪೇಟೆ ಜೆಎಂಎಫ್ ಸಿ ನ್ಯಾಯಾಧೀಶರಾದ ಗೋಪಾಲಕೃಷ್ಣರವರು 1000 ರೂಪಾಯಿ ದಂಡ ಜೊತೆಗೆ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯನ್ನು ಒಂದು ದಿನ ಪೂರ್ತಿ ಸ್ವಚ್ಛಗೊಳಿಸುವ ಮೂಲಕ ಸಮುದಾಯ ಶಿಕ್ಷೆ ವಿಧಿಸಿದ್ದು ಆರೋಪಿಗಳು ಇಂದು ಸರ್ಕಾರಿ ಆಸ್ಪತ್ರೆಯನ್ನು ಸ್ವಚ್ಛಗೊಳಿಸಿದ್ರು.