ಇನ್ನು ಮನೆವರೆಗೆ ಸಿಲಿಂಡರ್ ಪೂರೈಕೆಗೆ ಬ್ರೇಕ್

ನವದೆಹಲಿ :ಕೇಂದ್ರ ಸರ್ಕಾರವು ಎಲ್ ಪಿಜಿ ಗ್ಯಾಸ್ ಸಿಲಿಂಡರ್ ದರ ಹೆಚ್ಚಿಸಿದೆ. 50 ರೂಪಾಯಿಯಷ್ಟು ಒಮ್ಮೆಲೆ ಹೆಚ್ಚಳ ಮಾಡಿದ್ದು, ಗ್ರಾಹಕರಿಗೆ ಬರೆ ಬಿದ್ದಿದೆ. ಇನ್ನೊಂದೆಡೆ ವಿತರಕರು ಗ್ರಾಹಕರಿಗೆ ಮತ್ತೊಂದು ಬರೆ ಎಳೆಯಲು ಸಿದ್ಧರಾಗಿದ್ದಾರೆ.
ಬೇಡಿಕೆ ಈಡೇರಿಸಲು ಎಲ್ ಪಿಜಿ ಸಿಲಿಂಡರ್ ವಿತರಕರ ಸಂಘವು ಮೂರು ತಿಂಗಳ ಗಡುವು ನೀಡಿದೆ. ಈಡೇರದಿದ್ದರೆ ಮನೆ ಬಾಗಿಲಿಗೆ ಬರುತ್ತಿದ್ದ ಸಿಲಿಂಡರ್ ಬರುವುದು ಸ್ಥಗಿತಗೊಳ್ಳಲಿದೆ.
ಕಮಿಷನ್ ಹೆಚ್ಚಳಕ್ಕೆ ಆಗ್ರಹ, ಎಲ್ಪಿಜಿ ಸಿಲಿಂಡರ್ ವಿತರಣೆಯಲ್ಲಿ ಕನಿಷ್ಠ ರೂಪಾಯಿ 150 ಕಮಿಷನ್ ನೀಡಬೇಕು ಎಂದು ಒಕ್ಕೂಟವು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಆಗ್ರಹಿಸಿದೆ. ಬೇಡಿಕೆ ಮತ್ತು ಪೂರೈಕೆಯ ಆಧಾರದ ಮೇಲೆ ಅನಿಲ ಪೂರೈಕೆಯಾಗಬೇಕು. ಆದ್ರೆ ಬೇಡಿಕೆ ಇಲ್ಲದಿದ್ದರೂ ತೈಲ ಕಂಪನಿಗಳು ಗೃಹಬಳಕೆಯೇತರ ಸಿಲಿಂಡರ್ ಗಳನ್ನು ವಿತರಕರಿಗೆ ಬಲವಂತವಾಗಿ ಕಳುಹಿಸುತ್ತಿವೆ ಎಂದು ದೂರಿದೆ.
ಎಲ್ಪಿಜಿ ವಿತರಕರ ಸಂಘವು ಸರ್ಕಾರಕ್ಕೆ ಮುಷ್ಕರ ಎಚ್ಚರಿಕೆ ನೀಡಿದೆ. ಮೂರು ತಿಂಗಳೊಳಗೆ ತನ್ನ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಷ್ಕರ ನಡೆಸುವುದಾಗಿ ಸಂಘ ಘೋಷಿಸಿದೆ. ಪ್ರತಿಭಟನೆಗೆ ಮುಂದಾದ್ರೆ, ನಿಮ್ಮ ಮನೆಗೆ ಗ್ಯಾಸ್ ಸಿಲಿಂಡರ್ ಗಳ ಪೂರೈಕೆ ನಿಲ್ಲುವುದು ಗ್ಯಾರಂಟಿ.
‘ನಮ್ಮ ಬೇಡಿಕೆಗಳು, ವಿಶೇಷವಾಗಿ ಉನ್ನತ ಆಯೋಗವು ಮೂರು ತಿಂಗಳೊಳಗೆ ಈಡೇರಿಸದಿದ್ದರೆ, ನಾವು ಮುಷ್ಕರ ನಡೆಸುವುದು ಖಚಿತ. ಬೇಡಿಕೆ ಪತ್ರದ ಮೇಲಿನ ಪ್ರಸ್ತಾವನೆಯನ್ನು ವಿವಿಧ ರಾಜ್ಯಗಳ ಸದಸ್ಯರು ಅನುಮೋದಿಸಿದ್ದಾರೆ ಎಂದು ತಿಳಿದು ಬಂದಿದೆ.
ವಿತರಕರ ಬೇಡಿಕೆಗಳ ಕುರಿತು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯಕ್ಕೂ ಪತ್ರ ಬರೆಯಲಾಗಿದೆ. ಸದ್ಯ ಎಲ್ ಪಿಜಿ ಕಮಿಷನ್ ತುಂಬಾ ಕಡಿಮೆ ಆಗಿದ್ದು, ನಿರ್ವಹಣಾ ವೆಚ್ಚ ಭರಿಸಲು ಆಗದು ಎಂದು ಹೇಳಿದೆ. ಒಂದೆಡೆ ದರ ಏರಿಕೆ ಹೊಡೆತ, ಮತ್ತೊಂದೆಡೆ ಮನೆ ಬಾಗಿಲಿಗೆ ಸಿಲಿಂಡರ್ ಬರದಿದ್ದರೆ ಜನರು ಪರದಾಡುವುದು ಗ್ಯಾರಂಟಿ.