ಅಡ್ಯಾರ್ನಲ್ಲಿ ವಕ್ಫ್ ತಿದ್ದುಪಡಿ ಕಾಯಿದೆಯ ವಿರುದ್ಧ “ಶಾಂತಿಯುತ” ಪ್ರತಿಭಟನೆಯ ಮುಖವಾಡದ ಹಿಂದಿನ ಅಸಲಿ ಕಥೆ

ಮಂಗಳೂರು :ಮಂಗಳೂರು ಅಡ್ಯಾರ್ನಲ್ಲಿ ವಕ್ಫ್ ತಿದ್ದುಪಡಿ ಕಾಯಿದೆಯ ವಿರುದ್ಧ ನಡೆದ ರ್ಯಾಲಿಯು ಸಾರ್ವಜನಿಕವಾಗಿ “ಶಾಂತಿಯುತ” ಎಂದು ಬಿಂಬಿತವಾಗುತ್ತಿದ್ದರೂ, ಇದೇ ಕಾರ್ಯಕ್ರಮದ ಮಧ್ಯೆ ನಡೆದ ಕೆಲವು ಗಂಭೀರ ಅಸಭ್ಯ ನಡೆಗಳು ಇದೀಗ ಬಹಿರಂಗವಾಗುತ್ತಿದೆ.
ಪ್ರತಿಕ್ಷಣಗಳ ದಾರಿ ಹಿಡಿದಿರುವ ಈ ಘಟನೆಯ ಪ್ರಕಾರ, ಸುಮಾರು 300ಕ್ಕೂ ಹೆಚ್ಚು ವ್ಯಕ್ತಿಗಳ ಗುಂಪು ಎರಡು ನಾಗರಿಕರನ್ನು ಗುರಿಯಾಗಿಸಿಕೊಂಡು, ಅವರ ಕಾರನ್ನು ಸುಮಾರು ಎರಡು ಗಂಟೆಗಳ ಕಾಲ ಮುತ್ತಿಗೆ ಹಾಕಿದ ಘಟನೆ ನಡೆದಿದೆ. ಸಂತ್ರಸ್ತರ ಕಾರಿನಲ್ಲಿ 25ಕ್ಕೂ ಹೆಚ್ಚು ಡೆಂಟ್ಗಳನ್ನು ಮಾಡಲಾಗಿದ್ದು, ವಾಹನಕ್ಕೆ ಗಂಭೀರ ಹಾನಿಯುಂಟಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಘಟನೆಯ ದೃಷ್ಟಿಯಿಂದ, ಪ್ರತಿಭಟನೆಯು ಶಾಂತಿಯುತವಾಗಿತ್ತು ಎಂಬ ಪ್ರಚಾರಕ್ಕೆ ಇದು ತೀವ್ರ ತದ್ವಿರುದ್ದವಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಹಲವಾರು ಪ್ರಕರಣಗಳಿದ್ದರೂ ಸಾರ್ವಜನಿಕರು ಅಸಹಾಯಕರಾಗಿ,ಆಪತ್ತಿನಲ್ಲಿದ್ದ ತಮ್ಮ ಅನುಭವವನ್ನು ಬಹಿರಂಗಪಡಿಸುವಲ್ಲಿ ಹಿಂಜರಿಯುತ್ತಿದ್ದಾರೆ. ಈ ತರಹದ ಕೆಲವು ಘಟನೆಗಳು ಪ್ರತಿಭಟನೆಯ ಮೂಲ ಉದ್ದೇಶಕ್ಕೆ ಮಸುಕನ್ನುಂಟುಮಾಡುವಂತಿವೆ. ಒಂದು ಕಡೆ ‘ಶಾಂತಿಯುತ ರ್ಯಾಲಿ’ ಎಂಬ ಭಾಷ್ಯವಿರುವಾಗ, ಇನ್ನೊಂದು ಕಡೆ ಸಾರ್ವಜನಿಕ ಆಸ್ತಿಯ ನಾಶ ಹಾಗೂ ದಾಳಿಗಳ ಮಾಹಿತಿಗಳು ತೀವ್ರ ಗಮನ ಸೆಳೆಯುತ್ತಿವೆ. ಇಂತಹ ಘಟನೆಗಳು, ರಾಜಕೀಯ ಅಥವಾ ಧಾರ್ಮಿಕ ನಿಲುವುಗಳ ಹೊರತಾಗಿಯೂ, ಸಮಾಜದಲ್ಲಿ ಶಾಂತಿಯುತ ಸಂವಾದಕ್ಕೆ ಅಡ್ಡಿಯಾಗದಂತೆ, ಜವಾಬ್ದಾರಿಯುತ ನಾಗರಿಕ ನಡವಳಿಕೆಯ ಅಗತ್ಯತೆಯನ್ನು ಮತ್ತೆ ಒತ್ತಿ ಹೇಳುತ್ತವೆ.ಇಂತಹ ಪ್ರಕರಣಗಳ ನಡುವೆ ನಡೆದ ಪ್ರತಿಭಟನೆ ಶಾಂತಿಯುತವೆಂದು ಕರೆಯಲು ಸಾಧ್ಯವೇ?.