ಮಂಗಳೂರಿನ ಯುವಕ 5 ಪವನ್ ಚಿನ್ನದೊಂದಿಗೆ ನಾಪತ್ತೆ

ಮಂಗಳೂರು : ಬಡಗುಳಿಪಾಡಿ ಮಳಲಿ ಮಟ್ಟಿ ನಿವಾಸಿ ರಾಮಚಂದ್ರ ಎಂಬವರ ಪುತ್ರ ನಿಖೀಲ್ ರಾಜ್ (21) ಎ.11ರಂದು ಮನೆಯಿಂದ ನಾಪತ್ತೆಯಾಗಿದ್ದಾನೆ.
ರಾತ್ರಿ ಸುಮಾರು 9 ಗಂಟೆ ಸುಮಾರಿಗೆ ಮನೆಯ ಕಪಾಟನಿಂದ 5 ಪವನ್ ಚಿನ್ನವನ್ನು ತೆಗೆದುಕೊಂಡು ಹೋಗಿದ್ದು, ತಾನು ತುಂಬಾ ಸಾಲದಲ್ಲಿರುವುದಾಗಿ ಲೆಟರ್ನಲ್ಲಿ ಬರೆದು ಇಟ್ಟಿದ್ದಾನೆ.
ಆತ ಬಳಸುತ್ತಿದ್ದ ಸ್ನೇಹಿತೆಯ ಮೊಬೈಲ್ ಫೋನ್ ಕೂಡಾ ವಾಪಾಸು ನೀಡಿ ಹೋಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. 5.5 ಅಡಿ ಎತ್ತರ, ಗೋಧಿ ಮೈ ಬಣ್ಣ , ಸಾಧಾರಣ ಶರೀರ ಹೊಂದಿದ್ದು, ಕನ್ನಡ ಮತ್ತು ತುಳು ಭಾಷೆ ಗೊತ್ತಿದೆ. ಈತನ ಪತ್ತೆಯಾದರೆ ಬಜಪೆ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.