ಮಲೆ ಮಹದೇಶ್ವರ ದೇಗುಲದ ಗೋಪುರ ಹತ್ತಿ ಆತ್ಮಹತ್ಯೆ ಯತ್ನ – ಪೊಲೀಸ್ರಿಂದ ರಕ್ಷಣೆ

ಚಾಮರಾಜನಗರ : ಮಲೆ ಮಹದೇಶ್ವರ ದೇಗುಲದ ಗೋಪುರವನ್ನು ಹತ್ತಿ ವ್ಯಕ್ತಿಯೊಬ್ದ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಇಂದು ಮುಂಜಾನೆ ನಡೆದಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅರೆಬರೆ ಬಟ್ಟೆಯಲ್ಲಿರುವ ವ್ಯಕ್ತಿಯೊಬ್ಬ ಗೋಪುರವನ್ನು ಹತ್ತಿ ಕೆಳಗಿದ್ದವರನ್ನು ಆತಂಕದಲ್ಲಿ ತಳ್ಳಿದ್ದಾನೆ. ಕೊನೆಗೂ ಆತನ ಮನವೊಲಿಸಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಅಲ್ಲಿದ್ದ ಭಕ್ತಾದಿಗಳು ಆತನನ್ನು ಕೆಳಗೆ ಬೀಳದಂತೆ ಬೇಡಿಕೊಂಡರೂ ಸಹ ಆತ ಗೋಪುರದ ಕಲಶದವರೆಗೂ ಹತ್ತಿದ್ದಾನೆ.
ವಿನಯ್ ಆಚಾರ್ಯ ಎಂಬುವವರು ಈ ಪ್ರಕರಣದ ದೃಶ್ಯವನ್ನು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡಿದ್ದು ಪ್ರಕರಣದ ಸತ್ಯಾಸತ್ಯತೆ ಹಾಗೂ ವ್ಯಕ್ತಿಯ ಹಿನ್ನೆಲೆ ಪೊಲೀಸರಿಂದ ಇನ್ನಷ್ಟೇ ತಿಳಿದು ಬರಬೇಕಿದೆ.