Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಯತ್ನಾಳ್ ಉಚ್ಚಾಟನೆ:ಬಿಜೆಪಿ ಯಲ್ಲಿ ಬುಗಿಲೆದ್ದ ಆಕ್ರೋಶ -ಹಿಂದೂ ವಿರೋಧಿ ಬಿಜೆಪಿ ಎಂದ ಕಾರ್ಯಕರ್ತರು

Spread the love

ಬಿಜೆಪಿ ಹೈಕಮಾಂಡ್‌ ಮಾಜಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಚಾಟಿಸಿದ ನಂತರ, ರಾಜ್ಯದಲ್ಲಿ ಭಾರಿ ಅಸಮಾಧಾನ ಸ್ಫೋಟಗೊಂಡಿದೆ. ಯತ್ನಾಳ್ ಅವರ ಬೆಂಬಲಿಗರು ಮತ್ತು ಕೆಲವು ಕಾರ್ಯಕರ್ತರು ಖಂಡನೆ ವ್ಯಕ್ತಪಡಿಸಿದ್ದು, ಈ ನಿರ್ಧಾರ ಹಿಂದೂ ಪರ ಹೋರಾಟಗಾರನ ವಿರುದ್ಧ ನಡೆಯುವ षಡ್ಯಂತ್ರ ಎಂದು ಆರೋಪಿಸಿದ್ದಾರೆ.

ಯಡಿಯೂರಪ್ಪ ವಿರುದ್ಧ ಆಕ್ರೋಶ ತಲೆದೋರಿದ ಕಾರ್ಯಕರ್ತರು
ಬಿಜೆಪಿಯ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ಕೆಲ ಕಾರ್ಯಕರ್ತರು ಅಸಹ್ಯ ವ್ಯಕ್ತಪಡಿಸಿದ್ದು, ಅವರ ಭಾವಚಿತ್ರಕ್ಕೆ ಚಪ್ಪಲಿ ಹಾಕಿ ಆಕ್ರೋಶ ತೋರಿದರು. ಈ ಘಟನೆಗೆ ಅನೇಕ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ‘ಯಡಿಯೂರಪ್ಪ ಅವರ ವಿರುದ್ಧ ಪ್ರತಿಭಟನೆ ನಡೆಸುವುದು ಅನೈತಿಕ’ ಎಂದು ಒತ್ತಿಹೇಳಿದ್ದಾರೆ. ಕಾರ್ಯಕರ್ತರ ಆಕ್ರೋಶ ಬಿಜೆಪಿ ಹೈಕಮಾಂಡ್‌ ವಿರುದ್ಧ ಇರಬೇಕೆ ಹೊರತು ಯಡಿಯೂರಪ್ಪನವರು ಅಥವಾ ರಾಜ್ಯ ನಾಯಕರ ವಿರುದ್ಧ ಅಲ್ಲ ಎಂಬ ವಾದ ಮುಂದಾಗಿದೆ.

ಯತ್ನಾಳ್ ಹೋರಾಟ ಮುಂದುವರಿಯುತ್ತಾ?
ಯತ್ನಾಳ್ ಅವರನ್ನು ಉಚ್ಚಾಟನೆ ಮಾಡಿದ ತಕ್ಷಣವೇ ಅವರ ಬೆಂಬಲಿಗರು ಪ್ರತಿಭಟನೆಯ ಸ್ವರೂಪ ತಳೆದಿದ್ದಾರೆ. ಬಿಜೆಪಿ ಹಿಂದೂ ಪರ ಹೋರಾಟಗಾರರನ್ನು ಬಲಿಪಶು ಮಾಡುತ್ತಿದೆ ಎಂದು ಕೆಲ ಕಾರ್ಯಕರ್ತರು ಆರೋಪಿಸಿದ್ದಾರೆ. ಈ ಹಂತದಲ್ಲಿ ಯತ್ನಾಳ್ ಅವರ ಮುಂದಿನ ರಾಜಕೀಯ ಮುಂದುವರೆಯುತ್ತದಾ ಅಥವಾ ಬೇರೆ ದಾರಿಗೆ ತಿರುಗುತ್ತಾರಾ ಎಂಬುದು ಕುತೂಹಲ ಮೂಡಿಸಿದೆ.

ಬಿಜೆಪಿ ಹೈಕಮಾಂಡ್ ನಿರ್ಧಾರದ ಪರಿಣಾಮ
ರಾಜ್ಯದಲ್ಲಿ ಬಿಜೆಪಿ ಆಂತರಿಕ ಕಲಹ ಮತ್ತಷ್ಟು ಹಿಗ್ಗುವ ಲಕ್ಷಣಗಳು ಗೋಚರಿಸುತ್ತಿವೆ. ಯತ್ನಾಳ್ ಅವರನ್ನು ಹೊರಹಾಕಿದ ಹಿನ್ನೆಲೆಯಲ್ಲಿ, ಅವರ ಬೆಂಬಲಿಗರು ನವೆಂಬರೊಳಗೆ ದೊಡ್ಡ ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳಿವೆ. ಈ ನಿರ್ಧಾರದ ಪರಿಣಾಮ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಏನಾಗಬಹುದು ಎಂಬ ಪ್ರಶ್ನೆಯೂ ಉಧ್ಭವಿಸುದರೊಂದಿಗೆ ಬಿಜೆಪಿ ಹಿಂದೂ ವಿರೋಧಿಯಾಗಿದೆ ಎಂದು ಸ್ಪಷ್ಟವಾಗಿದೆ.


Spread the love
Share:

administrator

Leave a Reply

Your email address will not be published. Required fields are marked *