Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ತಮಿಳುನಾಡು ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ಎಐಎಡಿಎಂಕೆ ಜೊತೆ ಮೈತ್ರಿ; ಕಣದಿಂದ ಅಣ್ಣಾಮಲೈ ಔಟ್

Spread the love

ಚೆನ್ನೈ: ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಶುಕ್ರವಾರ 27 ಅಭ್ಯರ್ಥಿಗಳ ಸಂಪೂರ್ಣ ಪಟ್ಟಿಯನ್ನು ಪ್ರಕಟಿಸಿದೆ. ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ಜೊತೆ ಮೈತ್ರಿ ಮಾಡಿಕೊಂಡು ಪಕ್ಷವು ಚುನಾವಣೆಗೆ ಕಣಕ್ಕಿಳಿಯಲಿದೆ.
ಪಟ್ಟಿಯಲ್ಲಿ ಐದು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿರಿಸಲಾಗಿದೆ. ತಮಿಳಿಸೈ ಸೌಂದರರಾಜನ್, ವನತಿ ಶ್ರೀನಿವಾಸನ್, ಕೀರ್ತಿಕಾ ಶಿವಕುಮಾರ್, ಕವಿತಾ ಶ್ರೀಕಾಂತ್ ಮತ್ತು ವಿಜಯಧರಣಿ ಅವರಿಗೆ ಟಿಕೆಟ್ ನೀಡಲಾಗಿದೆ. ಪಕ್ಷದ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರನ್ನು ಈ ಬಾರಿ ಸ್ಪರ್ಧೆಗೆ ಇಳಿಸದಿರುವುದು ಗಮನ ಸೆಳೆದಿದೆ.

ಅಣ್ಣಾಮಲೈ ಅವರನ್ನು ಕಣಕ್ಕಿಳಿಸಲು ಪಕ್ಷದ ಮಟ್ಟದಲ್ಲಿ ಪ್ರಯತ್ನಗಳು ನಡೆದ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಘೋಷಣೆ ವಿಳಂಬಗೊಂಡಿತ್ತು. ಆದರೆ ಅವರು ಸ್ಪರ್ಧಿಸಲು ನಿರಾಕರಿಸಿದ್ದಾಗಿ ತಿಳಿದುಬಂದಿದೆ.
ಸೀಟು ಹಂಚಿಕೆ ಕುರಿತು ಮೈತ್ರಿ ಪಾಲುದಾರ ಎಐಎಡಿಎಂಕೆ ವಿರುದ್ಧ ಅಣ್ಣಾಮಲೈ ಇತ್ತೀಚೆಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಬಿಜೆಪಿಗೆ ಸೀಮಿತ ಪ್ರಭಾವವಿರುವ ಕ್ಷೇತ್ರಗಳನ್ನು ಮಾತ್ರ ನೀಡಲಾಗಿದೆ ಎಂದು ಅವರು ಹೇಳಿದ್ದರು. 2021ರ ವಿಧಾನಸಭಾ ಚುನಾವಣೆಯಲ್ಲಿ ಅರವಕುರಿಚಿಯಿಂದ ಹಾಗೂ 2024ರ ಲೋಕಸಭಾ ಚುನಾವಣೆಯಲ್ಲಿ ಕೊಯಮತ್ತೂರಿನಿಂದ ಸ್ಪರ್ಧಿಸಿದ್ದ ಅವರು, ಎರಡೂ ಬಾರಿ ಸೋತಿದ್ದರು.

ಅಭ್ಯರ್ಥಿಗಳ ಪೈಕಿ ಎಂ. ರಾಜಸಿಂಹ ಮಹೀಂದ್ರ (ಎಂ. ಅಶ್ವಿನ್ ಕುಮಾರ್) ಅವಡಿಯಿಂದ, ತೆಲಂಗಾಣದ ಮಾಜಿ ರಾಜ್ಯಪಾಲ ತಮಿಳಿಸೈ ಸೌಂದರರಾಜನ್ ಮೈಲಾಪುರದಿಂದ, ನಾಗೇಶ್ ಕುಮಾರ್ ಥಲ್ಲಿಯಿಂದ, ಸಿ. ಎಲುಮಲೈ ತಿರುವಣ್ಣಾಮಲೈದಿಂದ ಹಾಗೂ ಎಸ್.ಡಿ. ಪ್ರೇಮಕುಮಾರ್ ರಾಶಿಪುರದಿಂದ ಸ್ಪರ್ಧಿಸಲಿದ್ದಾರೆ.
ಮೊಡಕುರಿಚಿಯಿಂದ ಕೀರ್ತಿಕಾ ಶಿವಕುಮಾರ್, ಉದಗಮಂಡಲದಿಂದ ಭೋರರಾಜನ್, ಅವನಶಿಯಿಂದ ಕೇಂದ್ರ ಸಚಿವ ಎಲ್. ಮುರುಗನ್, ತಿರುಪೂರಿನಿಂದ ಎಸ್. ತಂಗರಾಜ್ ಹಾಗೂ ಕೊಯಮತ್ತೂರು ಉತ್ತರದಿಂದ ವನತಿ ಶ್ರೀನಿವಾಸನ್ ಕಣಕ್ಕಿಳಿಯಲಿದ್ದಾರೆ.

ಇತರ ಅಭ್ಯರ್ಥಿಗಳಲ್ಲಿ ಗೋವಿ ಚಂದ್ರು (ತಿರುವರೂರು), ಎಂ. ಮುರುಗಾನಂದಂ (ತಂಜಾವೂರು), ಸಿ. ಉದಯಕುಮಾರ್ (ಗಂಧರ್ವಕೊಟ್ಟೆ), ಎನ್. ರಾಮಚಂದ್ರನ್ (ಪುದುಕೊಟ್ಟೆ), ಕವಿತಾ ಶ್ರೀಕಾಂತ್ (ಅರಂತಂಗಿ), ಸಿ. ತಿರುಮಾರನ್ (ತಿರುಪತ್ತೂರು), ಪೊನ್ ವಿ. ಬಾಲಗಣಪತಿ (ಮಾನಮದುರೈ), ರಾಮ್ ಶ್ರೀನಿವಾಸನ್ (ಮಾದೂರು), ನಾಗೇದರನ್ (ರಾಮನಾಥಪುರಂ), ಕೆ.ಆ‌ರ್.ಎಂ. ರಾಧಾಕೃಷ್ಣನ್ (ತಿರುಚೆಂದೂರು), ಅನಂತನ್ ಅಯ್ಯಸಾಮಿ (ವಾಸುದೇವನಲ್ಲೂರು), ಎಸ್.ಪಿ. ಬಾಲಕೃಷ್ಣನ್ (ರಾಧಾಪುರಂ), ಎಂ.ಆರ್. ಗಾಂಧಿ (ನಾಗರ್‌ಕೋಯಿಲ್), ಟಿ. ಶಿವಕುಮಾರ್ (ಕೊಲಾಚೆಲ್), ಪಿ. ರಮೇಶ್ (ಪದ್ಮನಾಭಪುರಂ) ಹಾಗೂ ವಿಜಯಧರಣಿ (ವಿಳವಂಕೋಡ್) ಸೇರಿದ್ದಾರೆ.
ಫೆಬ್ರವರಿಯಲ್ಲಿ ಸಿಂಗನಲ್ಲೂರು, ಮಧುರೈ ದಕ್ಷಿಣ, ವಿರುಗಂಬಕ್ಕಂ, ಕಾರೈಕುಡಿ, ಶ್ರೀವೈಕುಂಠಂ ಮತ್ತು ಪದ್ಮನಾಭಪುರಂ ಕ್ಷೇತ್ರಗಳಿಗೆ ಉಸ್ತುವಾರಿಯಾಗಿ ನೇಮಕಗೊಂಡಿದ್ದ ಅಣ್ಣಾಮಲೈ, ತಮ್ಮ ತಂದೆಯ ಆರೋಗ್ಯದ ಕಾರಣ ನೀಡಿ ಆ ಜವಾಬ್ದಾರಿಯಿಂದ ವಿನಾಯಿತಿ ಕೋರಿ ಮನವಿ ಮಾಡಿದ್ದರು.


Spread the love
Share:

administrator

Leave a Reply

Your email address will not be published. Required fields are marked *