ಕರೆಂಟ್ ಶಾಕ್ ಗೆ ಮಹಿಳೆ ಬಲಿ – ಅನಾಥರಾದ ನಾಲ್ವರು ಮಕ್ಕಳು

ಬೆಂಗಳೂರು : ನೀರು ಹಿಡಿಯುವಾಗ ಕರೆಂಟ್ ಶಾಕ್ ಹೊಡೆದು ಮಹಿಳೆ ದಾರುಣ ಸಾವು ಕಂಡಿರುವ ಘಟನೆ ನಡೆದಿದೆ. ಚಾಮರಾಜಪೇಟೆಯ ಮಾರ್ಕೆಟ್ ರಸ್ತೆ ಆನಂದಪುರದಲ್ಲಿ ಘಟನೆ ನಡೆದಿದೆ, ಬೆಳಗ್ಗೆ 5.30ರ ವೇಳೆಗೆ ಮೋಟರ್ ಸ್ಟಾರ್ಟ್ ಮಾಡುವಾಗ ಕರೆಂಟ್ ತಗುಲಿ ಮಹಿಳೆ ಸಾವು ಕಂಡಿದ್ದಾಳೆ. ಸಾವು ಕಂಡ ಮಹಿಳೆಯನ್ನು 58 ವರ್ಷದ ಸೆಲ್ವಿ ಎಂದು ಗುರುತಿಸಲಾಗಿದೆ.ಮನೆ ಕೆಲಸ ಮಾಡಿ ಸೆಲ್ವಿ ಮನೆ ನಿವರ್ಹಿಸುತ್ತಿದ್ದಳು. ಸದ್ಯ ಮಹಿಳೆಯ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಮನೆ ಕೆಲಸ ಮಾಡಿ ಸೆಲ್ವಿ 4 ಜನ ಮಕ್ಕಳನ್ನ ಸಾಕುತ್ತಿದ್ದಳು. 12 ವರ್ಷಗಳ ಹಿಂದೆ ಗಂಡನನ್ನು ಮಹಿಳೆ ಕಳೆದುಕೊಂಡಿದ್ದಳು. ಈಗ ತಂದೆ ಮತ್ತು ತಾಯಿಯನ್ನ ಕಳೆದುಕೊಂಡು 4 ಮಕ್ಕಳು ಅನಾಥರಾಗಿದ್ದಾರೆ. ತಾಯಿಯ ಶವದ ಎದುರು ಮಕ್ಕಳು ಕಣ್ಣೀರಿಡುತ್ತಿರುವ ದೃಶ್ಯ ಹೃದಯವಿದ್ರಾವಕವಾಗಿದೆ.