Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಸುಳ್ಯ: ಅಂಗಡಿಯಲ್ಲಿ ಕಳ್ಳತನ – ಗ್ರಾಮಸ್ಥರಿಂದ ಆರೋಪಿಗಳ ಬಂಧನ

Spread the love

ಸುಳ್ಯ: ಅಂಗಡಿ ಕಳ್ಳತನ ಮಾಡುತ್ತಿದ್ದ ಇಬ್ಬರನ್ನು ಊರಿನ ಜನರು ಸೇರಿ ರೆಡ್ ಹ್ಯಾಂಡ್ ಆಗಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಸುಳ್ಯ ತಾಲೂಕಿನ ಕನಕಮಜಲಿನಲ್ಲಿ ಈ ಘಟನೆ ನಡೆದಿದ್ದು, ಆರೋಪಿಗಳಿಬ್ಬರು ಬಂಟ್ವಾಳ ತಾಲೂಕಿನ ಸಜೀಪ ಮೂಲದ ಸುಹೈಲ್ ಮತ್ತು ರಿಯಾಜ್ ಎಂದು ತಮ್ಮ ಪರಿಚಯ ಹೇಳಿಕೊಂಡಿದ್ದಾರೆ.
ರಾತ್ರಿ ಸರಿ ಸುಮಾರು 3.30 ರ ಸಮಯದಲ್ಲಿ ಇಲ್ಲಿನ ಸ್ಟೋರ್ ಒಂದಕ್ಕೆ ಈ ಇಬ್ಬರೂ ನುಗ್ಗಿದ್ದಾರೆ. ಕಟ್ಟಡದ ಮಾಲೀಕರ ಮಗನಿಗೆ ಅಂಗಡಿಯೊಳಗೆ ಶಬ್ಧವಾಗುತ್ತಿರುವುದು ಕೇಳಿಸಿ ನೋಡಲು ಬಂದಾಗ ಕಳ್ಳರ ಇರುವಿಕೆ ಗೊತ್ತಾಗಿದೆ. ಅಂಗಡಿಯ ಹೊರಗೆ ರಿಡ್ಜ್ ಕಾರೊಂದು ನಿಂತಿರುವುದು ಗಮನಿಸಿ ತಕ್ಷಣವೇ ಸ್ಥಳೀಯರಿಗೆಲ್ಲರಿಗೂ ಮಾಹಿತಿ ನೀಡಿದ್ದಾರೆ.

ತಕ್ಷಣ ಜಮಾಯಿಸಿ ಗ್ರಾಮದ ಜನರು ಇಬ್ಬರು ಕಳ್ಳರನ್ನು ಹಿಡಿದು ಕಟ್ಟಿ ಹಾಕಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿಗಳು ಕಾರನ್ನು ಬಾಡಿಗೆ ತೆಗೆದುಕೊಂಡು ಬಂದಿರುವುದಾಗಿ ಹೇಳಿದ್ದು, ಇದೇ ಕಾರಿನಲ್ಲಿ ತಿರುಗಾಡಿ ಹಲವೆಡೆ ಕಳವು ಮಾಡಿದ ಅನುಮಾನ ವ್ಯಕ್ತವಾಗಿದೆ. ಕನಕಮಜಲಿಗೆ ಬರುವ ಮೊದಲು ಕಾವು ಗ್ರಾಮದಲ್ಲೂ ಅಂಗಡಿ ಕಳ್ಳತನ ಮಾಡಿದ ಮಾಹಿತಿ ಲಭ್ಯವಾಗಿದೆ.


Spread the love
Share:

administrator

Leave a Reply

Your email address will not be published. Required fields are marked *