Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ನೆಲ್ಲಿದಡಿಗುತ್ತು ದೈವಾರಾಧನೆಗೆ ಅಡ್ಡಿ ಯಾರಿಂದ? ಎಂದಾಗ– ಅಡ್ಡಿ ಇಲ್ಲ ಎಂದ ಗುತ್ತಿನಮನೆಯವರು, ವಿವಾದ ಎಬ್ಬಿಸಿದವರು ಯಾರು?

Spread the love

ಮಂಗಳೂರು: ನೆಲ್ಲಿದಡಿಗುತ್ತಿನ ಕಾಂತೇರಿ ಜುಮಾದಿ ದೈವಾರಾಧನೆಗೆ ಎಂಎಸ್‌ಇಜೆಡ್ ಅಧಿಕಾರಿಗಳು ಅಡ್ಡಿ ಮಾಡಿದ್ದಾರೆ ಎಂಬ ವಿವಾದಕ್ಕೆ ಸಂಬಂಧಿಸಿದಂತೆ, ಜಿಲ್ಲಾಧಿಕಾರಿ ಮುಲೈ ಮುಗಿಲನ್ ಎಂಪಿ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ಸಭೆಯಲ್ಲಿ ಎಂಎಸ್‌ಇಜೆಡ್ ವ್ಯಾಪ್ತಿಯ ದೈವಾರಾಧನೆಗೆ ಯಾವುದೇ ತೊಂದರೆ ಇಲ್ಲ ಎಂಬುದನ್ನು ಜಿಲ್ಲಾಧಿಕಾರಿ ಹಾಗೂ ಅಧಿಕಾರಿಗಳು ಸ್ಪಷ್ಟಪಡಿಸಿದರು.

ಆಚರಣೆಗಾಗಿ ಅನುಮತಿ ಬೇಕಾ?
ಈ ವಿವಾದಕ್ಕೆ ಸ್ಪಷ್ಟತೆ ನೀಡಲು ಸಂಸದ ಕ್ಯಾ. ಬ್ರಿಜೇಶ್ ಚೌಟ ನೇತೃತ್ವದಲ್ಲಿ ಸಭೆ ನಡೆಯಿತು. “ಜನವರಿ ಹಾಗೂ ಫೆಬ್ರವರಿಯಲ್ಲಿ ನೀವು ದೈವಾರಾಧನೆ ನಡೆಸಲಿಲ್ಲವೇ? ಈಗ ತೊಂದರೆ ಏಕೆ?” ಎಂಬ ಪ್ರಶ್ನೆಯನ್ನು ಜಿಲ್ಲಾಧಿಕಾರಿಗಳು ಗುತ್ತಿನಮನೆಯವರಿಗೆ ಕೇಳಿದರು. ಇದಕ್ಕೆ ಗುತ್ತಿನಮನೆಯವರು, “ಸಂಕ್ರಾಂತಿ ಆಚರಣೆಗೆ ತೊಂದರೆ ಆಗಿಲ್ಲ, ಆದರೆ ಈ ಸಲ ಅನುಮತಿ ಕೇಳಿದಾಗ ‘ಚೆನ್ನೈ ವಿಭಾಗದಿಂದ ಅನುಮತಿ ಕೇಳಿದಾಗ ‘ಚೆನ್ನೈ ವಿಭಾಗದಿಂದ ಅನುಮತಿ ಪಡೆಯಬೇಕು’ ಎಂದರು, ಇದರಿಂದ ಗೊಂದಲ ಉಂಟಾಗಿದೆ” ಎಂದು ಪ್ರತಿಕ್ರಿಯಿಸಿದರು.

ವಿವಾದ ಎಬ್ಬಿಸಿದ್ದು ಯಾರು?
ಶಾಸಕ ಉಮಾನಾಥ ಕೋಟ್ಯಾನ್, “ಹಾಗಾದರೆ ಈ ವಿಷಯ ದಿಢೀರ್ ಎದ್ದಿದ್ದು ಹೇಗೆ?” ಎಂದು ಪ್ರಶ್ನಿಸಿದರು. ಗುತ್ತಿನಮನೆಯವರು “ನಮಗೆ ಗೊತ್ತಿಲ್ಲ, ನಾವು ಯಾವುದೇ ಹೋರಾಟ ಎಬ್ಬಿಸಿಲ್ಲ” ಎಂದು ಉತ್ತರಿಸಿದರು.

ಸ್ಥಳೀಯರು “ರಸ್ತೆ ಇದ್ದರೂ ಒಳಗೆ ಹೋಗಲು ಬಿಡುವುದಿಲ್ಲ. ಪ್ರತಿ ಸಲ ಅನುಮತಿ ಕೇಳಬೇಕಾದ ಸ್ಥಿತಿ ಬರಬಾರದು” ಎಂದು ಅಭಿಪ್ರಾಯಪಟ್ಟರು. ಸಂಸದ ಬ್ರಿಜೇಶ್ ಚೌಟ, “ದೈವಾರಾಧನೆಗೆ ಅಡ್ಡಿಯಾಗಬಾರದು. ಶಾಶ್ವತ ಪರಿಹಾರಕ್ಕೆ ಸೂಕ್ತ ವ್ಯವಸ್ಥೆ ಮಾಡಬೇಕು” ಎಂದು ಎಂಎಸ್‌ಇಜೆಡ್ ಎಂ.ಡಿ. ಸೂರ್ಯನಾರಾಯಣ ಅವರಿಗೆ ಸೂಚಿಸಿದರು.

ಈ ಬೆಳವಣಿಗೆಯ ನಂತರವೂ “ವಿವಾದ ಎಬ್ಬಿಸಿದವರು ಯಾರು? ಗುತ್ತಿನಮನೆಯವರಿಗೆ ತೊಂದರೆ ಇಲ್ಲದಿದ್ದರೆ ಈ ಗೊಂದಲ ಹುಟ್ಟಿದ್ದು ಹೇಗೆ?” ಎಂಬ ಪ್ರಶ್ನೆಗಳು ಅನಂತವಾಗಿ ಉಳಿದಿವೆ.


Spread the love
Share:

administrator

Leave a Reply

Your email address will not be published. Required fields are marked *