Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಹಾವೇರಿಯಲ್ಲಿ ಆನೆ ಆತಂಕ: ಸೆರೆಹಿಡಿಯಲು ಅರಣ್ಯ ಇಲಾಖೆ ಹರಸಾಹಸ; ಶಾಲಾ ಆವರಣ ಹೊಕ್ಕ ಸಲಗನಿಂದ ತಪ್ಪಿದ ಅನಾಹುತ

Spread the love

ಹಾವೇರಿ: ಕಳೆದ 4 ದಿನಗಳಿಂದ ಓಡಾಡುತ್ತಿರುವ ಒಂಟಿ ಸಲಗ (Elephant) ಇಂದು ಬೆಳಗ್ಗೆ ಹಿರೇಕೆರೂರು (Hirekerur) ಪಟ್ಟಣದಲ್ಲಿ ಕಾಣಿಸಿಕೊಂಡಿದೆ. ಹಿರೇಕೆರೂರು ಪಟ್ಟಣದ ದುರ್ಗಾದೇವಿ ನಗರದ ಶಾಸಕರ ಮಾದರಿ ಶಾಲೆಯ ಗೇಟ್ ಮುರಿದು ಆನೆ ಒಳ ಪ್ರವೇಶಿಸಿದೆ.

ಆರಂಭದಲ್ಲಿ ಬ್ಯಾಡಗಿ ಬಳಿಕ ರಾಣೆಬೆನ್ನೂರು ಈಗ ಹಿರೇಕೆರೂರಿನಲ್ಲಿ ಕಾಣಿಸಿಕೊಂಡಿದ್ದು ಸುತ್ತಮುತ್ತಲಿನ ಗ್ರಾಮಸ್ಥರು ಆತಂಕದಲ್ಲಿದ್ದಾರೆ. ರೈತರ ಜಮೀನಿನಲ್ಲಿ ಬೆಳೆದಿದ್ದ ಬೆಳೆಯನ್ನು ಹಾನಿ ಮಾಡುತ್ತಾ ಆನೆ ನುಗ್ಗುತ್ತಿದೆ. 

ನಿನ್ನೆ ರಾಣೆಬೇನ್ನೂರು ತಾಲೂಕಿನ ಕುಸಗೂರ ಗ್ರಾಮದ ಬಳಿ ಆನೆ ಪ್ರತ್ಯಕ್ಷವಾಗಿತ್ತು. ಇವತ್ತು ಶಿಕಾರಿಪುರದತ್ತ ಆನೆ ಮುಖ ಮಾಡಿದ್ದು ಸೆರೆಹಿಡಿಯಲು 4 ದಿನಗಳಿಂದ ಅರಣ್ಯ ಇಲಾಖೆ ಹರಸಾಹಸ ಪಡುತ್ತಿದೆ. ಆದರೆ ಒಂದೇ ಕಡೆ ನಿಲ್ಲದೆ ಬೇರೆ ಕಡೆ ಕಾಡಾನೆ ಹೋಗುತ್ತಿರುವುದರಿಂದ ಸೆರೆ ಹಿಡಿಯಲು ಕಷ್ಟವಾಗುತ್ತಿದೆ.


Spread the love
Share:

administrator

Leave a Reply

Your email address will not be published. Required fields are marked *