ಹಿಂದೂ ಮಹಾಸಾಗರದಲ್ಲಿ ‘ಸೆನ್ಯಾರ್’ ಮತ್ತು ‘ದಿತ್ವಾ’ ಚಂಡಮಾರುತಗಳ ವಿನಾಶ

‘ಸೆನ್ಯಾರ್’ ಮತ್ತು ‘ದಿತ್ವಾ’ ಎಂಬ ಎರಡು ಪ್ರಬಲ ಚಂಡಮಾರುತಗಳು ಹಿಂದೂ ಮಹಾಸಾಗರ ಪ್ರದೇಶದಾದ್ಯಂತ ವಿನಾಶವನ್ನ ಸೃಷ್ಟಿಸಿವೆ. 1,000ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ಹತ್ತಾರು ಸಾವಿರ ಜನರು ಸ್ಥಳಾಂತರಗೊಂಡಿದ್ದಾರೆ, ಇದು ಇಂಡೋನೇಷ್ಯಾ, ಥೈಲ್ಯಾಂಡ್ ಮತ್ತು ಶ್ರೀಲಂಕಾವನ್ನ ಹೆಚ್ಚಾಗಿ ಅಪ್ಪಳಿಸಿದ್ದು, ಭಾರತದ ದಕ್ಷಿಣ ಕರಾವಳಿಯಲ್ಲಿ ಸಾವುನೋವುಗಳಿಗೆ ಕಾರಣವಾಯಿತು.


ಕಳೆದ ವಾರ ಮಲಕ್ಕಾ ಜಲಸಂಧಿಯ ಮೇಲೆ ಉಂಟಾದ ಆಳವಾದ ವಾಯುಭಾರ ಕುಸಿತವಾಗಿದ್ದು, ಅದು ಸೆನ್ಯಾರ್ ಚಂಡಮಾರುತವಾಗಿ ಮಾರ್ಪಟ್ಟಿತು ಮತ್ತು ಈಗ ದಕ್ಷಿಣ ಚೀನಾ ಸಮುದ್ರದ ಮೇಲೆ ಚದುರಿಹೋಗಿದೆ ಎಂದು ಹಾಂಗ್ ಕಾಂಗ್ ವೀಕ್ಷಣಾಲಯವು ಬ್ಲೂಮ್ಬರ್ಗ್ ವರದಿಯಲ್ಲಿ ಉಲ್ಲೇಖಿಸಿದೆ. ಸೆನ್ಯಾರ್ ದುರ್ಬಲಗೊಂಡ ತಕ್ಷಣ, ಮತ್ತೊಂದು ಚಂಡಮಾರುತ – ದಿತ್ವಾ ಚಂಡಮಾರುತ – ಬಂಗಾಳ ಕೊಲ್ಲಿಯ ನೈಋತ್ಯ ಭಾಗದಲ್ಲಿ ಶ್ರೀಲಂಕಾ ಮತ್ತು ಭಾರತದ ಕಡೆಗೆ ಸಾಗುತ್ತಿದೆ.