“ಸಿದ್ದರಾಮಯ್ಯಗೆ ನಮ್ಮ ಸಂಪೂರ್ಣ ಬೆಂಬಲ: ವಾಟಾಳ್ ನಾಗರಾಜ್”

ಬೆಂಗಳೂರು: ಎಲ್ಲಿಯವರೆಗೂ ಆರೋಗ್ಯ ಚೆನ್ನಾಗಿರುತ್ತೋ ಅಲ್ಲಿವರೆಗೂ ಸಿದ್ದರಾಮಯ್ಯ (Siddaramaiah) ಸಿಎಂ ಆಗಿ ಮುಂದುವರಿಯಲಿ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದ್ದಾರೆ. ನಗರದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯಗೆ ಎಂತಹದ್ದೇ ಸಂದರ್ಭದಲ್ಲೂ ಬೆಂಬಲ ನೀಡುತ್ತೇವೆ. ರಾಜೀನಾಮೆ ಕೊಡಬೇಕಿಲ್ಲ, ಅವರ ಜತೆ ನಾವಿದ್ದೇವೆ ಎಂದು ಹೇಳಿದ್ದಾರೆ.
