ಇಂದು ನಟ ದರ್ಶನ್ & ಗ್ಯಾಂಗ್ ವಿರುದ್ಧ ದೋಷಾರೋಪ ಹೊರಿಸೋ ಪ್ರಕ್ರಿಯೆ : ಎಲ್ಲರ ಚಿತ್ತ ಕೋರ್ಟ್ ನತ್ತ

ಬೆಂಗಳೂರು : ಕೊಲೆ ಆರೋಪಿ ದರ್ಶನ್ ಗೆ ಇಂದು ಮಹತ್ವದ ದಿನವಾಗಿದ್ದು ಇಂದು ದೋಷಾರೋಪ ನಿಗದಿ ಮಾಡುವ ಕೋರ್ಟ್, ಕೋರ್ಟ್ ನಲ್ಲಿ ದೋಷಾರೋಪ ಹೋರಿಸುವ ಪ್ರಕ್ರಿಯೆ ಇರಲಿದ್ದು ಹಾಗಾಗಿ ದರ್ಶನ ಮತ್ತು ಗ್ಯಾಂಗ್ಗೆ ಇಂದು ಬಿಗ್ ಡೇ ಆಗಿದೆ.

ಎಲ್ಲ 17 ಆರೋಪಿಗಳು ಒಪ್ಪಿಗಳು ಕೋರ್ಟಿಗೆ ಹಾಜರಾಗಬೇಕು. ಜಡ್ಜ್ ಆರೋಪಗಳನ್ನು ಎಲ್ಲರಿಗೂ ಓದಿ ಹೇಳಲಿದ್ದಾರೆ. ಆರೋಪ ನಿರಾಕರಿಸಿದರೆ ಸಾಕ್ಷಿ ವಿಚಾರಣೆ ಆರಂಭವಾಗಲಿದೆ. ಆರೋಪಗಳನ್ನು ಒಪ್ಪಿಕೊಂಡರೆ ಶಿಕ್ಷ ವಿಧಿಸಬಹುದು ಆರೋಪ ಸುಳ್ಳು ಎಂದು ನಿರಾಕರಿಸುವ ಸಾಧ್ಯತೆ ಹೆಚ್ಚಾಗಿದೆ ಸಾಕ್ಷಿಗಳ ಪಟ್ಟಿ ಆಧರಿಸಿ ಕೋರ್ಟ್ ವಿಚಾರಣೆ ದಿನಾಂಕ ನಿಗದಿ ಮಾಡಲಿದೆ. ಆರೋಪ ನಿಗದಿಯ ಬಳಿಕ ಸಾಕ್ಷಿಯ ವಿಚಾರಣೆ ನಡೆಯಲಿದೆ.