ಮೂಡಿಗೆರೆಯಲ್ಲಿ ಸವಾರನಿಗೆ ಶಾಕ್: ಸ್ಕೂಟಿಯೊಳಗೆ ಸೇರಿಕೊಂಡ ನಾಗರಹಾವು; ದಿಗಿಲು ಬಿದ್ದು ಕ್ಷಣದಲ್ಲೇ ಇಳಿದ ಕುಡಿದ ‘ಎಣ್ಣೆ’ ನಶೆ!

ಚಿಕ್ಕಮಗಳೂರು: ರಸ್ತೆ ಬದಿ ವಾಹನ ನಿಲ್ಲಿಸಿ ಸ್ಕೂಟಿ ಸವಾರನೊಬ್ಬ ಎಣ್ಣೆ ಹೊಡೆಯಲು ಹೋಗಿದ್ದು, ಎಣ್ಣೆ ಹೊಡೆದು ಬರುವಷ್ಟರಲ್ಲಿ ನಾಗರಹಾವು ವೊಂದು ಸ್ಕೂಟಿಯೊಳಗೆ ಸೇರಿದ ಘಟನೆ ಮೂಡಿಗೆರೆ ಪಟ್ಟಣದ ಗಂಗನಮಕ್ಕಿಯಲ್ಲಿ ಅ.21ರ ಮಂಗಳವಾರ ನಡೆದಿದೆ.

ರಮೇಶ್ ಎಂಬವರಿಗೆ ಸೇರಿದ್ದ ಸ್ಕೂಟಿಯಲ್ಲಿ ಈ ಘಟನೆ ನಡೆದಿದ್ದು, ಸವಾರ ವಾಹನ ಹತ್ತುವಾಗ ಬಾಲ ನೋಡಿ ಭಯಗೊಂಡು, ಒಂದೇ ಕ್ಷಣಕ್ಕೆ ಕುಡಿದ ಎಣ್ಣೆ ನಶೆ ಫುಲ್ ಇಳಿದಿತ್ತು.
ಎಣ್ಣೆ ಏಟಲ್ಲೇ ಹಾವನ್ನು ಹೊರತೆಗೆಯಲು ಸವಾರ ಸಾಹಸ ಮಾಡುತ್ತಿದ್ದ. ಈ ವೇಳೆ ಅದೇ ರಸ್ತೆಯಲ್ಲಿ ಹೋಗುತ್ತಿದ್ದ ಸ್ನೇಕ್ ಆರೀಫ್ ಹಾವನ್ನು ನೋಡಿ ಸೆರೆ ಹಿಡಿದಿದ್ದಾರೆ.
10 ನಿಮಿಷಗಳ ಕಾಲ ಸ್ಕೂಟಿಯ ಮುಂಭಾಗ ಬಿಚ್ಚಿ ಹಾವನ್ನು ಸೆರೆ ಹಿಡಿದ ಸ್ನೇಕ್ ಆರೀಫ್ ಹಾವನ್ನು ಚಾರ್ಮಾಡಿ ಅರಣ್ಯಕ್ಕೆ ಬಿಟ್ಟಿದ್ದಾರೆ ಎಂದು ವರದಿಯಾಗಿದೆ