ಅಪ್ಪನ ಕೈಯಲ್ಲಿ ಮಗುವಿನ ಕೊನೆಯ ಓಟ: ಕಾಲ್ತುಳಿತಕ್ಕೆ ಪುಟ್ಟ ಕಂದ ಬಲಿ

ಚೆನ್ನೈ: ಶನಿವಾರ ಕರೂರ್ನಲ್ಲಿ ನಡೆದ ಕಾಲ್ತುಳಿತದಲ್ಲಿ 40 ಜನರು ಮೃತಪಟ್ಟು, ಅನೇಕರು ಗಾಯಗೊಂಡಿದ್ದರು. ಈ ದುರಂತ ಕಾಲ್ತುಳಿತದ ನಂತರ, ತಮಿಳುನಾಡಿನ ಕರೂರ್ ಜನರಲ್ ಆಸ್ಪತ್ರೆಗೆ ತಂದೆಯೊಬ್ಬರು ತಮ್ಮ ಮಗುವಿನ ಶವವನ್ನು ಅಪ್ಪಿಕೊಂಡು ಗೋಳಾಡುತ್ತಾ ಓಡಿಬಂದಿರುವ ಹೃದಯ ವಿದ್ರಾವಕ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ. ನಟ-ರಾಜಕಾರಣಿ ವಿಜಯ್ ಮತ್ತು ಅವರ ಪಕ್ಷ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಆಯೋಜಿಸಿದ್ದ ರಾಜಕೀಯ ರ್ಯಾಲಿಯಲ್ಲಿ ಭಾಗವಹಿಸಿದ್ದ 40 ಜನರು ಕಾಲ್ತುಳಿತದಿಂದ ಮೃತಪಟ್ಟಿದ್ದಾರೆ. ಅದರಲ್ಲಿ 10 ಮಕ್ಕಳು ಮತ್ತು 17 ಮಹಿಳೆಯರು ಕೂಡ ಸೇರಿದ್ದಾರೆ.
