ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿ ಬಲಿ: ರಕ್ತದ ಗುಂಪಿನ ತಪ್ಪಾದ ವರದಿ

ಗೌರಿಬಿದನೂರು: ರಕ್ತಸ್ರಾವದಿಂದ ತಾಲ್ಲೂಕಿನ ಪುಲುಗಾನಹಳ್ಳಿ ಬಾಣಂತಿ ಭಾಗ್ಯಮ್ಮ (30) ಮೃತಪಟ್ಟಿದ್ದು, ಇದಕ್ಕೆ ರಕ್ತದ ಗುಂಪಿನ ಗೊಂದಲ ತಳುಕು ಹಾಕಿಕೊಂಡಿದೆ.

ಅಲೀಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಭಾಗ್ಯಮ್ಮ ಅವರ ರಕ್ತದ ಗುಂಪು ‘ಬಿ+’ ಎಂದು ವರದಿ ನೀಡಿದ್ದರು.
ಗೌರಿಬಿದನೂರು ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸಿಜೇರಿಯನ್ ಮೂಲಕ ಅವರಿಗೆ ಹೆರಿಗೆಯಾಗಿತ್ತು.
ಶಸ್ತ್ರಚಿಕಿತ್ಸೆ ನಂತರ ರಕ್ತಸ್ರಾವ ಹೆಚ್ಚಾಗಿದೆ. ರಕ್ತ ನೀಡಲು ಪರೀಕ್ಷೆ ನಡೆಸಿದಾಗ ‘ಬಿ-‘ ಗುಂಪು ಎಂದು ವರದಿ ಬಂದಿದೆ. ವೈದ್ಯರು ಇಲ್ಲಿ ರಕ್ತ ನೀಡಿ ಬೆಂಗಳೂರಿನ ಆಸ್ಪತ್ರೆಗೆ ಕಳುಹಿಸಿದ್ದು ಅಲ್ಲಿ ಬಾಣಂತಿ ಮೃತಪಟ್ಟಿದ್ದಾರೆ.