ಲೋಕ ಅದಾಲತ್ನಲ್ಲಿ ರಾಜೀ ಸಂಧಾನ: ಮಗುವಿನ ಭವಿಷ್ಯಕ್ಕಾಗಿ ವಿಚ್ಛೇದನ ಕಣಕ್ಕಿಳಿದಿದ್ದ ದಂಪತಿ ಮತ್ತೆ ಒಂದಾದರು

ಚಾಮರಾಜನಗರ : ವಿವಾಹ ವಿಚ್ಛೇದನ ಕೋರಿ ಚಾಮರಾಜನಗರ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದ ದಂಪತಿ ಮಗುವಿನ ಭವಿಷ್ಯಕ್ಕಾಗಿ ಒಂದಾಗುತ್ತೇವೆ ಎಂದು ಜಿಲ್ಲಾ ನ್ಯಾಯಾಲಯದಲ್ಲಿ ನಡೆದ ಲೋಕ ಅದಾಲತ್ ನಲ್ಲಿ ನ್ಯಾಯಾಧೀಶರ ಎದುರು ರಾಜೀ ಸಂಧಾನದ ಮೂಲಕ ಒಂದಾದರು.

ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿ ಗ್ರಾಮದ ರಾಜಶೇಖರ್ ಮೂರ್ತಿ ಹಾಗೂ ಸುಮಾ ದಂಪತಿ ಕ್ಷುಲ್ಲಕ ಕಾರಣಕ್ಕೆ 2023ರಲ್ಲಿ ವಿಚ್ಛೇದನ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಕಳೆದ ಎರಡು ವರ್ಷಗಳಿಂದಲೂ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿತ್ತು.
ಈ ದಂಪತಿಗೆ ಇಂಚರ ಎನ್ನುವ ಮಗಳಿದ್ದು ದೂರವಾಗಿದ್ದ ದಂಪತಿ ಹಾಗೂ ಮಗುವಿನ ಸ್ಥಿತಿಯನ್ನು ಗಮನಿಸಿದ ಅರ್ಜಿದಾರರ ಪರ ವಕೀಲರು ಮನವೊಲಿಸಿದ ಕಾರಣ ದಂಪತಿ ಲೋಕ ಅದಾಲತ್ ನಲ್ಲಿ ಪರಸ್ಪರ ಒಪ್ಪಿಗೆ ಸೂಚಿಸಿ, ಜಿಲ್ಲಾ ನ್ಯಾಯಾಧೀಶರಾದ ಜಿ.ಪ್ರಭಾವತಿ ಸಮ್ಮುಖದಲ್ಲಿ ರಾಜೀ ಸಂಧಾನದ ಮೂಲಕ ಪ್ರಕರಣವನ್ನು ಮುಕ್ತಾಯಗೊಳಿಸಿಕೊಂಡು ಮತ್ತೆ ಒಂದಾಗಿದ್ದಾರೆ