Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಸೊಳ್ಳೆ ನಿಯಂತ್ರಣಕ್ಕೆ ಶಿರಾ ಕೆರೆಯಲ್ಲಿ ಬ್ಯಾಕ್ಟೀರಿಯಾ ಔಷಧಿ ಪ್ರಯೋಗ!

Spread the love

ಶಿರಾ(ತುಮಕೂರು) : ನೀರಿನ ಸಂರಕ್ಷಣೆ ಹಾಗೂ ಸೊಳ್ಳೆಗಳ ನಿರ್ಮೂಲನೆಗೆ ಬ್ಯಾಸಿಲಸ್ ಕನ್ಸೋರ್ಟಿಯಂನ ಬ್ಯಾಕ್ಟೀರಿಯಲ್ ಎಂಬ ಪರಿಸರ ಸ್ನೇಹಿ ಔಷಧವನ್ನು ನೀರಿನಲ್ಲಿ ಹಾಕುವ ಮೂಲಕ ಕೊಳಚೆ ನೀರನ್ನು ಸಂಸ್ಕರಿಸಲು ಹಾಗೂ ಸೊಳ್ಳೆಗಳನ್ನು ನಿರ್ಮೂಲನೆ ಮಾಡಬಹುದು.

ಇದನ್ನು ರಾಜ್ಯದಲ್ಲಿ ಪ್ರಥಮ ಬಾರಿಗೆ ಶಿರಾ ತಾಲೂಕಿನಿಂದ ಪ್ರಯೋಗ ಮಾಡುತ್ತಿದ್ದು ಇದು ಯಶಸ್ವಿಯಾದರೆ ದೇಶಾದ್ಯಂತ ನೀರಿನ ಸಂರಕ್ಷಣೆಗೆ ಅನುಕೂಲವಾಗಲಿದೆ ಎಂದು ಶಾಸಕ ಡಾ.ಟಿ.ಬಿ.ಜಯಚಂದ್ರ ಹೇಳಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಹಿಂದೆ ನಾನು ಸಚಿವನಾಗಿದ್ದ ವೇಳೆ ಸೊಳ್ಳೆಗಳನ್ನು ಸರ್ವನಾಶ ಮಾಡಲು ಒಂದು ಔಷಧಿಯನ್ನು ಆಮದು ಮಾಡಿಕೊಂಡು ಸಿಂಪಡಿಸಲಾಗಿತ್ತು, ಅದು ಯಶಸ್ವಿಯೂ ಆಗಿತ್ತು. ಆ ನಂತರ ಅದು ಅಲ್ಲಿಗೆ ಸ್ಥಗಿತವಾಗಿತ್ತು. ಅದೇ ರೀತಿ ಮತ್ತೊಂದು ಪ್ರಯೋಗ ಮಾಡಲು ಮುಂದಾಗಿದ್ದು, ಬ್ಯಾಸಿಲಸ್ ಕನ್ಸೋರ್ಟಿಯಂನ ಬ್ಯಾಕ್ಟೀರಿಯಲ್ ಎಂಬ ದ್ರಾವಣವನ್ನು ಕೊಳಚೆ ನೀರಿನಲ್ಲಿ ಹಾಕಿದಾಗ ಆಗ ಕೊಳಚೆ ನೀರಿನಲ್ಲಿರುವ ವಾಸನೆ, ಕೊಚ್ಚೆ ಎಲ್ಲವೂ ಸರಿಯಾಗುತ್ತದೆ. ಈ ಪ್ರಯೋಗವನ್ನು ನಗರದ ಜಾಜಮ್ಮನ ಕಟ್ಟೆಯ ನೀರಿನಲ್ಲಿ ಇಂದು ಪ್ರಯೋಗ ಮಾಡಿದ್ದು, ಇದು 15 ದಿನಗಳೊಳಗೆ ನೀರು ಸ್ವಚ್ಛವಾಗಿ ಸೊಳ್ಳೆಗಳು ಸಾಯುತ್ತವೆ. ಇದರಿಂದ ಜನರಿಗೆ ಸೊಳ್ಳೆಗಳ ಕಾಟ ತಪ್ಪುತ್ತದೆ ಎಂದರು.


Spread the love
Share:

administrator

Leave a Reply

Your email address will not be published. Required fields are marked *