ಬೀಗ ಹಾಕಿದ್ದ ಮನೆಯಲ್ಲಿ ಕಳ್ಳತನ, ₹2.80 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

ನಗರದ ಸೇಡಂ ರಸ್ತೆಯ ವೀರೇಂದ್ರ ಪಾಟೀಲ ಬಡಾವಣೆಯಲ್ಲಿ ಕಳೆದ ಮಾರ್ಚ್ 6ರಂದು ನಡೆದ ಕಳ್ಳತನದ ಬಗ್ಗೆ ಸಂತ್ರಸ್ತರು ದೂರು ದಾಖಲಿಸಿದ್ದಾರೆ.

ನಾಗಪ್ಪ ಮದ್ದೂರ ಎಂಬುವವರು ತಮ್ಮ ಮನೆಯಲ್ಲಿಟ್ಟಿದ್ದ ಬಂಗಾರದ ಮೂರು ಎಳೆ ಚೈನ್, ಬಂಗಾರ ಲಾಕೆಟ್, ಮಕ್ಕಳ ಉಂಗುರ, ನಗದು ₹ 40 ಸಾವಿರ ಸೇರಿ ₹ 2.80 ಲಕ್ಷ ವೌಲ್ಯದ ಕಳ್ಳತನ ಆಗಿರುವುದಾಗಿ ಎಂ.ಬಿ. ನಗರ ಠಾಣೆಗೆ ದೂರು ನೀಡಿದ್ದಾರೆ.
ಪತ್ನಿಗೆ ಆರೋಗ್ಯ ಸಮಸ್ಯೆಯಿಂದ ಚಿಕಿತ್ಸೆಗೆಂದು ಮಾ.6ರಂದು ಬೆಂಗಳೂರಿಗೆ ಹೋಗಿದ್ದರು. ಆ ವೇಳೆ ಮನೆಯ ಕೀಲಿ ಮುರಿದಿದ್ದು ನೋಡಿ, ಕರೆ ಮಾಡಿ ತಿಳಿಸಿದಾಗ ಕಳ್ಳತನ ಆಗಿದ್ದು ತಿಳಿದಿದೆ. ಮರುದಿನ ಪತ್ನಿ ನಿಧನ ಹೊಂದಿರುವ ಕಾರಣ ಅಂತ್ಯ ಸಂಸ್ಕಾರ ನಡೆಸಿದ್ದರು. ಬಳಿಕ ನೋಡಿದಾಗ ಅಲ್ಮೇರಾದಲ್ಲಿದ್ದ ಚಿನ್ನಾಭರಣ ಹಾಗೂ ಹಣ ಕಳ್ಳತನವಾಗಿದ್ದು ಗೊತ್ತಾಗಿದೆ ಎಂದಿದ್ದಾರೆ.