Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಬಾಳೆಬರೆ ಘಾಟ್‌ ರಸ್ತೆ ಕುಸಿತ – ಭಾರೀ ವಾಹನ ಸಂಚಾರಕ್ಕೆ ನಿಷೇಧ, ಪರ್ಯಾಯ ಮಾರ್ಗ ಸೂಚನೆ

Spread the love

ಶಿವಮೊಗ್ಗ:ಕುಂದಾಪುರ ತಾಲೂಕಿನ ಬಾಳೆಬರೆ ಘಾಟ್‌ನಲ್ಲಿ ರಸ್ತೆ ಕುಸಿತದ ಹಿನ್ನೆಲೆಯಲ್ಲಿ ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸಿ ಶಿವಮೊಗ್ಗ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಘಾಟ್ ಕೆಲವು ದಿನಗಳ ಹಿಂದೆ ರಸ್ತೆ ಕುಸಿತವಾಗಿತ್ತು. ಇದರಿಂದ ಭಾರೀ ವಾಹನಗಳ ಸಂಚಾರಕ್ಕೆ ಅಪಾಯಕಾರಿಯಾಗಿದೆ. ತೀರ್ಥಹಳ್ಳಿ-ಕುಂದಾಪುರ ರಾಜ್ಯ ಹೆದ್ದಾರಿಯ ಮಾಸ್ತಿಕಟ್ಟೆಯಿಂದ ಹೊಸಂಗಡಿವರೆಗೆ ಭಾರಿ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿದೆ.ಪರ್ಯಾಯ ಮಾರ್ಗವಾಗಿ ವಾಹನಗಳು ತೀರ್ಥಹಳ್ಳಿ – ರಾವೆ – ಕಾನುಗೋಡು – ನಾಗರಾಳ – ಕೊಲ್ಲೂರು – ಕುಂದಾಪುರ ರಸ್ತೆ, ತೀರ್ಥಹಳ್ಳಿ – ಯಡೂರು – ಮಾಸ್ತಿಕಟ್ಟೆ – ಕಾನುಗೋಡು – ನಗರ – ಕೊಲ್ಲೂರು – ಕುಂದಾಪುರ ಅಥವಾ ಶಿವಮೊಗ್ಗ – ಹೊನ್ನಾವರ ಹೆದ್ದಾರಿ – ಭಟ್ಕಳ – ಬೈಂದೂರು – ಕುಂದಾಪುರ ಮಾರ್ಗವನ್ನು ಬಳಸಬಹುದು. 


Spread the love
Share:

administrator

Leave a Reply

Your email address will not be published. Required fields are marked *