Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಪುತ್ತೂರಲ್ಲಿ ತಲವಾರ ಸದ್ದು – ಸಾರ್ವಜನಿಕರಿಂದ ಹಿಡಿತ, ರಾಜು ವಶಕ್ಕೆ

Spread the love

ಪುತ್ತೂರು : ತಲವಾರ್ ಹಿಡಿದು ಸಾರ್ವಜನಿಕರಿಗೆ ಬೆದರಿಕೆ ಹಾಕುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಬಂಧಿತನನ್ನು ಆರೋಪದಲ್ಲಿ ಹಾಸನ ಮೂಲದ, ಪ್ರಸ್ತುತ ಬಂಟ್ವಾಳದಲ್ಲಿ ವಾಸವಾಗಿರುವ ರಾಜು (45) ಎಂದು ಗುರುತಿಸಲಾಗಿದೆ. ಆರೋಪಿ ಬೊಳುವಾರಿನಲ್ಲಿ ತಲವಾರನ್ನು ಶರ್ಟ್ ಹಿಂಬದಿಗೆ ಸಿಕ್ಕಿಸಿ ಪ್ರದರ್ಶನ ಮಾಡುತ್ತಿದ್ದಾಗ ಅದು ನೆಲಕ್ಕೆ ಬಿದ್ದಿದೆ. ಮಾರಕಾಸ್ತ್ರವನ್ನು ಕಂಡ ಸಾರ್ವಜನಿಕರು ಅಪಾಯದ ಭೀತಿಯಿಂದ ಆತನನ್ನು ಸುತ್ತುವರಿದು ಹಿಡಿದುಕೊಂಡರು. ಪೊಲೀಸರು ರಾಜೇಶ್‌ನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ತಲವಾರನ್ನು ಹರಿತಗೊಳಿಸಲೆಂದು ಕಮ್ಮಾರನ ಬಳಿಗೆ ತೆಗೆದುಕೊಂಡು ಹೋಗುತ್ತಿದ್ದೆ ಎಂದಿದ್ದಾನೆ ಎನ್ನಲಾಗಿದೆ. ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *